ಬೆಳಗಾವಿ; ಜೈಲಿನಲ್ಲಿ ಖೈದಿ ಆತ್ಮಹತ್ಯೆ

Update: 2021-10-21 14:22 GMT
ಸಾಂದರ್ಭಿಕ ಚಿತ್ರ

ಬೆಳಗಾವಿ, ಅ.21: ಖೈದಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಲ್ಲಿನ ಹಿಂಡಲಗಾ ಕಾರಾಗೃಹದ ಆವರಣದಲ್ಲಿರುವ ಹಳೆ ವಸತಿ ಗೃಹದಲ್ಲಿ ಬುಧವಾರ ತಡರಾತ್ರಿ ನಡೆದಿದೆ ಎಂದು ವರದಿಯಾಗಿದೆ.

ದೇಹರಾಮದುರ್ಗ ತಾಲೂಕಿನ ನರಸಾಪುರ ಗ್ರಾಮದ ನಿಂಗಪ್ಪ ಬುಗ್ಗಿಪೂಜಾರಿ(48) ಎಂಬಾತ ಮೃತ ಖೈದಿ ಎಂದು ತಿಳಿದುಬಂದಿದೆ.

10 ವರ್ಷಗಳ ಹಿಂದೆ ಪತ್ನಿ ಕೊಲೆ ಪ್ರಕರಣದಡಿ ನಿಂಗಪ್ಪ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ. ಪ್ರಸ್ತುತ ಈತ ಹಿಂಡಲಗಾ ಜೈಲಿನ ಹೊರತೋಟ ಕೆಲಸಕ್ಕೆ ನೇಮಕವಾಗಿದ್ದ. ಸದ್ಯಕ್ಕೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News