ಉಪ ಚುನಾವಣೆ: ಎರಡೂ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಓಲೈಕೆಯ ನಾಟಕ ಬಿಟ್ಟರೆ ಕಾಂಗ್ರೆಸ್ ಸಾಧನೆ ಏನು?; ಸಚಿವ ಈಶ್ವರಪ್ಪ

Update: 2021-10-22 15:57 GMT

ಶಿವಮೊಗ್ಗ,ಅ.22: ಹಾನಗಲ್ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನವರು ವೈಯಕ್ತಿಕ ಟೀಕೆ ಮಾಡುತ್ತಿರುವುದು ಸರಿಯಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲವುದು ಖಚಿತವಾಗಿದೆ. ಜೆಡಿಎಸ್, ಕಾಂಗ್ರೆಸ್, ಬಿಜೆಪಿಯ ತ್ರಿಕೋನ ಸ್ಪರ್ಧೆಯಂತೂ ಇದ್ದೇ ಇದೆ. ಚುನಾವಣೆಯಲ್ಲಿ ಪ್ರಚಾರ ಮಾಡುವುದು ಆಯಾ ಪಕ್ಷಗಳ ಕರ್ತವ್ಯ ಕೂಡ. ಆದರೆ, ವೈಯುಕ್ತಿಕ ಟೀಕೆ ಸಲ್ಲದು. ಈ ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಏನು ಸಾಧನೆ ಮಾಡಿದೆ ಎಂದು ಹೇಳಬೇಕು. ಅಲ್ಪಸಂಖ್ಯಾತರ  ಓಲೈಕೆಯ ನಾಟಕ ಬಿಟ್ಟರೆ ಬೇರೆನು ಮಾಡಿಲ್ಲ ಎಂದರು.

ಜಗಮೆಚ್ಚಿದ ಮೋದಿ:

ಭಾರತ ಇಂದು ಲಸಿಕೆ ನೀಡುವಲ್ಲಿ ವಿಶ್ವದಲ್ಲಿಯೇ ಪ್ರಥಮ ಸ್ಥಾನ ಹೊಂದಿದೆ. ಇದು ಬಹುದೊಡ್ಡ ಸಾಧನೆಯಾಗಿದೆ ನಾವು ಇಂದು ನೂರು ಕೋಟಿ ಲಸಿಕೆಯನ್ನು ನೀಡಿದ್ದೇವೆ. ಇದಕ್ಕೆಲ್ಲ ಕಾರಣ ಪ್ರಧಾನಿ ಮೋದಿಯವರು. ಅವರನ್ನು ಜಗತ್ತೇ ಕೊಂಡಾಡುತ್ತಿದೆ. ಅವರ ಈ ಸಾಧನೆ ಭಾರತದ ಹೆಮ್ಮೆ ಕೂಡಾ ಜನರನ್ನು ಕೋರೊನಾದಿಂದ ರಕ್ಷಣೆ ಮಾಡಬೇಕೆಂಬ ಅವರ ನೈತಿಕ ಬೆಂಬಲ ಕಂಡು ಕಣ್ಣುತುಂಬಿ ಬರುತ್ತದೆ ಎಂದರು.

ಮೋದಿಜೀ ಯವರು ಕೇವಲ ವಿಜ್ಞಾನಿಗಳಿಗೆ, ವೈದ್ಯರಿಗೆ ಅಭಿನಂದನೆ ಹೇಳಿಲ್ಲ. ಅದರ ಬದಲು ಲಸಿಕೆ ಹಾಕಿಸಲು ಕಾರಣರಾದ ಎಲ್ಲಾ ವಾರಿಯರ್ಸ್ ಗಳಿಗೆ, ಸಂಘ ಸಂಸ್ಥೆಗಳಿಗೆ ತಮ್ಮ ಅಭಿನಂದನೆ ಸಲ್ಲಿಸಿದ್ದಾರೆ. ಅವರ ಈ ಅಭಿನಂದನೆ ನಮ್ಮೆಲ್ಲರಿಗೂ ಸ್ಪೂರ್ತಿ ತಂದಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News