ಅನುಗ್ರಹ ಯೋಜನೆ ಮರು ಚಾಲನೆಗೆ ಸರಕಾರ ಆದೇಶ

Update: 2021-10-26 16:41 GMT

ಬೆಂಗಳೂರು, ಅ.26: ಪಶುಸಂಗೋಪನ ಇಲಾಖೆಯ ವತಿಯಿಂದ ಮೃತಪಟ್ಟ ಜಾನುವಾರುಗಳಿಗೆ ಪರಿಹಾರ ನೀಡಲು ಜಾರಿಗೊಳಿಸಿದ್ದ ಅನುಗ್ರಹ ಯೋಜನೆಯನ್ನು ಮುಂದುವರೆಸುವಂತೆ ಸರಕಾರ ಆದೇಶ ಹೊರಡಿಸಿದೆ. 

ಯೋಜನೆಯ ಅಡಿಯಲ್ಲಿ ಆಕಸ್ಮಿಕವಾಗಿ ಮೃತಪಟ್ಟ ಕುರಿಗಳಿಗೆ ರೂ.5,000, ದನಗಳಿಗೆ ರೂ.10,000 ಹಾಗೂ ಕುರಿಮರಿಗಳಿಗೆ ರೂ.2,500 ನೀಡಲಾಗುತ್ತಿತ್ತು. ಆದರೆ ಈ ಯೋಜನೆಯನ್ನು ರಾಜ್ಯ ಸರಕಾರವು ಸ್ಥಗಿತಗೊಳಿಸಿತ್ತು.

ಸೋಮವಾರ ಶಿವಮೊಗ್ಗದಲ್ಲಿ 35 ಕುರಿಗಳು ಮೃತಪಟ್ಟ ಘಟನೆ ರಾಜ್ಯದ ಗಮನ ಸೆಳೆದಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಪರಿಹಾರ ನೀಡಲು ವಿಫಲವಾದ ರಾಜ್ಯ ಸರಕಾರವನ್ನು ಟೀಕಿಸಲಾಗಿತ್ತು. ಈ ನಿಟ್ಟಿನಲ್ಲಿ ಮಂಗಳವಾರ ಅನುಗ್ರಹ ಯೋಜನೆಯನ್ನು ಮುಂದುವರೆಸುವಂತೆ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News