ಕೊಳ್ಳೇಗಾಲ ನಗರಸಭೆ ಉಪಾಧ್ಯಕ್ಷೆ ಸ್ಥಾನಕ್ಕೆ ಸುಶೀಲಾಅವಿ ರೋಧವಾಗಿ ಆಯ್ಕೆ

Update: 2021-10-30 15:24 GMT

ಕೊಳ್ಳೇಗಾಲ: ಪಟ್ಟಣದ ನಗರಸಭೆ ಸಬಾಂಗಣದಲ್ಲಿ ನಡೆದ ಉಪಾಧ್ಯಕ್ಷೆ ಸ್ಥಾನಕ್ಕೆ ಚುನಾವಣೆಯಲ್ಲಿ 31 ನೇ ವಾರ್ಡಿನ ಸುಶೀಲಾ ಶಾಂತರಾಜು ರವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆಂದು ಉಪವಿಭಾಗಾಧಿಕಾರಿ ಡಾ.ಗಿರೀಶ್ ದಿಲೀಪ್ ಬದೋಲೆ ಘೋಷಣೆ ಮಾಡಿದರು.

ಸುಶೀಲಾರವರು ಬೆಳಿಗ್ಗೆ 10-15 ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಬೇರೆ ಯಾರು ನಾಮಪತ್ರ ಸಲ್ಲಿಸಲಿರಲಿಲ್ಲ. ಯಾರು ನಾಮಪತ್ರ ಸಲ್ಲಿಸದೇ ಇದ್ದರಿಂದ ಸುಶೀಲಾರವರು ಅವಿರೋಧವಾಗಿ ಆಯ್ಕೆಯಾದರು ಎಂದು ಘೋಷಿಸಿದರು.

ಈ ಚುನಾವಣಾ ಪ್ರಕ್ರಿಯೆಯಲ್ಲಿ ಕಾಂಗ್ರೇಸ್11, ಬಿಎಸ್ಪಿ 2, ಪಕ್ಷೇತರರು 4 ಮಂದಿ ಭಾಗವಹಿಸಿದರು. ಬಿಜೆಪಿ ಏಳು ಮಂದಿ ಸದಸ್ಯರು ಗೈರಾಗಿದ್ದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಇವರು, ನನ್ನನು ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲಾ ಸದಸ್ಯರಿಗೂ ಚಿರಋಣಿಯಾಗಿದ್ದೇನೆ. ನನ್ನ ಅವಧಿಯಲ್ಲಿ ಎಲ್ಲಾ ಸದಸ್ಯರ ಸಹಕಾರ ಪಡೆದು ನಗರಸಭೆ ಅಭಿವೃದ್ಧಿ ಶ್ರಮಿಸುವುದಾಗಿ ತಿಳಿಸಿದರು.

ಪುನೀತ್ ರಾಜ್ ಕುಮಾರ್ ನಿಧನರಾದ ಹಿನ್ನೆಲೆ ಯಾವುದೇ ಸಂಭ್ರಮಾಚರಣೆ ಮಾಡದೇ ಅವರ ಆತ್ಮಕ್ಕೆ ಶಾಂತಿ ಸೀಗಲಿ ಎಂದು ಮೌನ ಸಲ್ಲಿರುವುದಾಗಿ ಹೇಳಿದರು. 

ಕಾಂಗ್ರೇಸ್ ವರಿಷ್ಠರಿಂದ ಅಭಿನಂದನೆ.

ಮಾಜಿ ಶಾಸಕರುಗಳಾದ ಎಸ್.ಜಯಣ್ಣ, ಎ.ಆರ್.ಕೃಷ್ಣಮೂರ್ತಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ತೋಟೇಶ್, ಕಾರ್ಯದರ್ಶಿ ರವಿ ಹಾಗೂ ಇತರೆ ಮುಖಂಡರುಗಳು ನೂತನವಾಗಿ ಆಯ್ಕೆಗೊಂಡ ಉಪಾಧ್ಯಕ್ಷರನ್ನು ಆಭಿನಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News