×
Ad

ಮನು ಬಳಿಗಾರ್ ಪು.ತಿ.ನ ಪ್ರಶಸ್ತಿಗೆ ಆಯ್ಕೆ

Update: 2021-10-30 22:05 IST

ಬೆಂಗಳೂರು, ಅ.30: ಎಸ್.ಕೆ.ಎಫ್. ಕಾರ್ಮಿಕ ಸಂಘದ ವತಿಯಿಂದ ನೀಡುವ ಪ್ರತಿಷ್ಠಿತ ಪು.ತಿ.ನ ಪ್ರಶಸ್ತಿ-2021ಕ್ಕೆ ನಾಡೋಜ ಡಾ. ಮನು ಬಳಿಗಾರ್ ಆಯ್ಕೆಯಾಗಿದ್ದಾರೆ. ಎಸ್.ಕೆ.ಎಫ್. ಕಾರ್ಖಾನೆಯ ರಾಜ್ಯೋತ್ಸವ ಸಮಿತಿಯು ಕನ್ನಡನಾಡು ನುಡಿಗೆ ಸಲ್ಲಿಸಿದ ಅಪಾರ ಸೇವೆಯನ್ನು ಪರಿಗಣಿಸಿ, ಪುರಸ್ಕøತರನ್ನು ಆಯ್ಕೆ ಮಾಡಲಾಗಿದೆ.

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನ.1ರ ಬೆಳಗ್ಗೆ 7 ಗಂಟೆಗೆ ಕಾರ್ಖಾನೆಯ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಾಡೋಜ ಡಾ. ಮನು ಬಳಿಗಾರ್‍ಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಹಿಂದೆ ಪ್ರಶಸ್ತಿಯನ್ನು ಬಿ.ವಿ. ವೈಕುಂಠರಾಜು, ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಗಿರೀಶ್ ಕಾಸರವಳ್ಳಿ, ಎಚ್.ಎಸ್. ವೆಂಕಟೇಶಮೂರ್ತಿ, ನರಹಳ್ಳಿ ಬಾಲಸುಬ್ರಹ್ಮಣ್ಯ, ಷ. ಶೆಟ್ಟರ್ ಮುಂತಾದಾರಿಗೆ ನೀಡಿ ಗೌರವಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News