ಮೈಸೂರು: ಮತ್ತೆ ಚಾಮುಂಡಿ ಬೆಟ್ಟದಲ್ಲಿ ಭೂಮಿ ಬಿರುಕು

Update: 2021-11-03 16:17 GMT
ಚಾಮುಂಡಿ ಬೆಟ್ಟದ ನಂದಿ ದೇವಸ್ಥಾನ

ಮೈಸೂರು,ನ.3: ನಾಡ ಅಧಿದೇವತೆ ಶ್ರೀ ಚಾಮುಂಡೇಶ್ವರಿ ನೆಲೆಸಿರುವ ಚಾಮುಂಡಿ ಬೆಟ್ಟದಲ್ಲಿ ಮತ್ತೆ ಭೂಮಿಯು ಬಿರುಕು ಬಿಟ್ಟಿರುವುದು ಕಂಡು ಬಂದಿದೆ.

ಚಾಮುಂಡಿ ಬೆಟ್ಟದ ನಂದಿಗೆ ಹೋಗುವ ರಸ್ತೆ ಕುಸಿದಿದ್ದು, ಮಳೆ ಸಂಪೂರ್ಣ ನಿಂತು ಭೂಮಿಯ ತೇವಾಂಶ ಹೋಗುವ ತನಕ ಕಾಮಗಾರಿ ಆರಂಭಿಸದೆ ಇರಲು ಲೋಕೋಪಯೋಗಿ ಇಲಾಖೆಯು ಚಿಂತನೆ ನಡೆಸಿದ್ದು,ಅಲ್ಲಿಯವರೆಗೆ ನಂದಿ ಮಾರ್ಗದ ರಸ್ತೆಯು ಸಾರ್ವಜನಿಕರಿಗೆ ಸಂಪೂರ್ಣ ಬಂದ್ ಆಗಿದೆ.

ಭಾರೀ ಮಳೆಯಿಂದಾಗಿ ನಂದಿ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಅ.20ರಂದು 30 ಅಡಿಯಷ್ಟು ರಸ್ತೆ ಕುಸಿದಿತ್ತು. ನಂತರ, ಕಳೆದ ವಾರ ಜಾಸ್ತಿ ಮಳೆ ಬಂದ ಮೇಲೆ 70 ಅಡಿಯಷ್ಟು ಕುಸಿದು ಹೋಗಿದ್ದರಿಂದ ರಸ್ತೆಯೇ ಇಬ್ಬಾಗವಾಗುವ ಮಟ್ಟಿಗೆ ಬಂದು ತಲುಪಿದೆ. ನಂದಿ ದೇವಸ್ಥಾನಕ್ಕೆ ಹೋಗುವ ಮಾರ್ಗಕ್ಕೆ ವಾಹನಗಳ ಸಂಚಾರವನ್ನು ನಿಷೇಧಿಸಿರುವ ಪೊಲೀಸರು ವ್ಯೆ ಪಾಯಿಂಟ್ ಮತ್ತು ಉತ್ತನಹಳ್ಳಿ ಮಾರ್ಗವಾಗಿ ನಂದಿ ದೇವಸ್ಥಾನ ಹಾದು ಬರುತ್ತಿದ್ದ ಮಾರ್ಗದಲ್ಲೂ ಬ್ಯಾರಿಕೇಡ್‍ಗಳನ್ನು ಹಾಕಲಾಗಿತ್ತು. ಇದೀಗ ಬುಧವಾರ ರಸ್ತೆ ಕುಸಿದಿರುವ ಕಡೆಯಲ್ಲೇ 50 ಮೀಟರ್‍ನಷ್ಟು ರಸ್ತೆ ಬಿರುಕುಬಿಟ್ಟಿರುವುದನ್ನು ಕಾಣಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News