ಸಾಹಿತಿ, ಕಲಾವಿದರ ಮಾಸಾಶನದ ಅನುದಾನ ಬಿಡುಗಡೆ

Update: 2021-11-11 16:10 GMT

ಬೆಂಗಳೂರು, ನ.11: ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲಿರುವ ನಾಡಿನ ಸಾಹಿತಿ, ಕಲಾವಿದರು ಮತ್ತು ವಿಧವಾ ಮಾಸಾಶನ ಯೋಜನೆ ಸಂಬಂಧ 6.25 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

2021ನೆ ಸಾಲಿನ ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ತಿಂಗಳಿಗೆ ಸಂಬಂಧಿಸಿದಂತೆ 6.25 ಕೋಟಿ ರೂ. ಮೂರನೇ ಕಂತಿನ ಅನುದಾನ ಬಿಡುಗಡೆ ಮಾಡಲಾಗಿದೆ.

ಎರಡನೇ ಕಂತಿನಲ್ಲಿ ಬಿಡುಗಡೆಯಾದ ಅನುದಾನದಲ್ಲಿ 1.09 ಕೋಟಿ ರೂ. ಉಳಿಕೆಯಾಗಿರುತ್ತದೆ. ಹೀಗಾಗಿ ಮೂರನೇ ಕಂತಿನಲ್ಲಿ 6.25 ಕೋಟಿ ರೂ. ಬಿಡುಗಡೆ ಮಾಡಿದಲ್ಲಿ ಎರಡನೇ ಕಂತಿನ ಉಳಿಕ ಅನುದಾನವನ್ನೂ ಸೇರಿಸಿ ಒಟ್ಟು ಮೂರು ತಿಂಗಳುಗಳಿಗೆ ಮಾಸಾಶನ, ವಿಧವಾ ಮಾಸಾಶನ ಪಾವತಿಗೆ ಅನುದಾನವನ್ನು ಬಿಡುಗಡೆ ಮಾಡಲು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕೋರಿತ್ತು.

ಈ ಹಿನ್ನೆಲೆಯಲ್ಲಿ 2021-22ನೆ ಸಾಲಿನ ಮಾಸಾಶನ, ವಿಧವಾ ಮಾಸಾಶನ ಪಾವತಿ ಅನುದಾನವನ್ನು ಬಿಡುಗಡೆ ಮಾಡಲು ಹಂಚಿಕೆ ಮಾಡಿರುವ 25 ಕೋಟಿ ರೂ. ಅನುದಾನದಿಂದ 6.25 ಕೋಟಿ ರೂ. ಮೂರನೇ ಕಂತಿನ ಅನುದಾನ ಬಿಡುಗಡೆ ಮಾಡುವಂತೆ ಮನವಿಯೂ ಸಲ್ಲಿಸಲಾಗಿತ್ತು.

ಹಾಗಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹಣ ಬಿಡುಗಡೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News