ಹಂಸಲೇಖರಿಗೆ ಕಿರುಕುಳ ನೀಡಲಾಗುತ್ತಿದೆ, ನಾವು ಅವರ ಜೊತೆ ನಿಲ್ಲಬೇಕು: ನಟ ಚೇತನ್ ಅಹಿಂಸಾ

Update: 2021-11-20 06:21 GMT

ಬೆಂಗಳೂರು: ಪೇಜಾವರ ಶ್ರೀ ಕುರಿತ ಹೇಳಿಕೆಗೆ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಕ್ಷಮೆಯಾಚಿಸಿದ್ದರೂ ಪೊಲೀಸ್ ದೂರುಗಳನ್ನು ನೀಡುವ ಮೂಲಕ ಅವರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ನಟ ಚೇತನ್ ಅಹಿಂಸಾ ಹೇಳಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಅವರು, 'ಬ್ರಾಹ್ಮಣ ಮತ್ತು ಬ್ರಾಹ್ಮಣ್ಯದ ಗುಂಪುಗಳು ಹಂಸಲೇಖ ಅವರು ಕ್ಷಮೆಯಾಚಿಸಿ ಒಂದು ವಾರವಾದ ಮೇಲೆಯೂ ಕೂಡ ಪೊಲೀಸ್ ದೂರುಗಳನ್ನು ನೀಡುವ ಮೂಲಕ ಅವರಿಗೆ ಕಿರುಕುಳ ನೀಡುತ್ತಲೇ ಇವೆ' ಎಂದು ದೂರಿದ್ದಾರೆ.

'ಇಂತಹ ಬ್ರಾಹ್ಮಣ ಮತ್ತು ಬ್ರಾಹ್ಮಣ್ಯದ ಸಂಸ್ಥೆಗಳು, ಸಮಾನತೆಯನ್ನು ಬಯಸುವ ಮತ್ತು ಅದಕ್ಕಾಗಿ ಹೋರಾಡುವ ನಮ್ಮನ್ನು, ತಮ್ಮ ಅಧೀನದಲ್ಲಿಯೇ ಮುಂದುವರಿಸಲು ಬಯಸುತ್ತವೆ' ಎಂದಿರುವ ನಟ ಚೇತನ್,  ನಾವು ಹಂಸಲೇಖ ಅವರ ಜೊತೆ ನಿಲ್ಲಬೇಕು ಎಂದು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News