ಎಸಿಬಿ ದಾಳಿ; ಬಿಡಿಎ ಎಂದರೆ 'ಭ್ರಷ್ಟಾಚಾರ ಡೆವಲಪ್ ಮೆಂಟ್ ಅಥಾರಿಟಿ' ಎಂದ ಕಾಂಗ್ರೆಸ್

Update: 2021-11-20 12:04 GMT

ಬೆಂಗಳೂರು: 'ಬಿಜೆಪಿಯ 40ಶೇ. ಕಮಿಷನ್ ಆಡಳಿತದಲ್ಲಿ ಬಿಡಿಎ ಎಂದರೆ ಭ್ರಷ್ಟಾಚಾರ ಡೆವಲಪ್ ಮೆಂಟ್ ಅಥಾರಿಟಿ ಎಂದಾಗಿದೆ!' ಎಂದು ಕಾಂಗ್ರೆಸ್ ಟೀಕಿಸಿದೆ. 

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಚೇರಿ(ಬಿಡಿಎ) ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದು, ಈ ಕುರಿತು ಟ್ವೀಟ್ ಮಾಡಿ ರಾಜ್ಯ ಸರಕಾರದ ವಿರುದ್ಧ  ಕಾಂಗ್ರೆಸ್ ಟೀಕಿಸಿದೆ

'ನಗರಾಭಿವೃದ್ಧಿ ಖಾತೆಯನ್ನು ಇಟ್ಟುಕೊಂಡಿರುವ ಮುಖ್ಯಮಂತ್ರಿಗಳೇ, ಬಿಡಿಯೆಯಲ್ಲಿ ನಡೆಯುತ್ತಿರುವ ಬೃಹತ್ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ನಿಮ್ಮಿಂದ ಸಾಧ್ಯವಾಗಿಲ್ಲವೇಕೆ? ಅಥವಾ ನಿಮಗೂ ಅದರಲ್ಲಿ ಪಾಲಿದೆಯೇ?' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪ್ರಶ್ನಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News