ಚಿಕ್ಕಮಗಳೂರು:ವೃದ್ಧೆ ಭಿಕ್ಷುಕಿಯಿಂದ ದೇವಸ್ಥಾನಕ್ಕೆ 20 ಸಾವಿರ ರೂ. ದೇಣಿಗೆ!

Update: 2021-11-23 07:21 GMT

ಚಿಕ್ಕಮಗಳೂರು: ಜಿಲ್ಲೆಯ ಕಡೂರಿನಲ್ಲಿ ವೃದ್ಧೆ ಭಿಕ್ಷುಕಿಯೊಬ್ಬರು ದೇವಾಲಯಕ್ಕೆ 20,000 ರೂಪಾಯಿ ದೇಣಿಗೆ ನೀಡಿ ಅಚ್ಚರಿ ಮೂಡಿಸಿದ್ದಾರೆ. 

ಕಡೂರು ತಾಲೂಕಿನ ಕೋಟೆ ಪಾತಾಳ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ ಆಡಳಿತ ಮಂಡಳಿಯ ಅಧ್ಯಕ್ಷರನ್ನ ಹುಡುಕಾಡಿದ ಭಿಕ್ಷುಕಿ ಬಳಿಕ ಇಲ್ಲಿನ ಸ್ವಾಮೀಜಿ ಅವರ ಕೈಗೆ ಒಟ್ಟು 20,000 ರೂಪಾಯಿಯ 500ರ 40 ನೋಟುಗಳನ್ನು ಕೊಟ್ಟಿದ್ದಾರೆ. 

ಅದೇ ಹಳೆಯ ಬಟ್ಟೆಯಲ್ಲಿ ಆಗಮಿಸಿದ್ದ ಅಜ್ಜಿಯನ್ನು ಹಣ ಕೇಳಲು ಬಂದಿದ್ದಾಳೆಂದು ಭಾವಿಸಿ ಅಲ್ಲಿ ನೆರೆದಿದ್ದವರು ಭಿಕ್ಷುಕಿಯನ್ನ ಓಡಿಸುತ್ತಿದ್ದರಂತೆ,  ಆದರೆ ಭಿಕ್ಷುಕಿ 20,000 ರೂ. ದೇಣಿಗೆ ನೀಡಿ ಆಂಜನೇಯನಿಗೆ ಬೆಳ್ಳಿಯ ಮುಖವಾಡ ಮಾಡಿಸಿ ಎಂದು ಆಡಳಿತ ಮಂಡಳಿಗೆ ಮನವಿ ಮಾಡಿದ್ದು, ನೆರೆದಿದ್ದವರಿಗೆ ಅಚ್ಚರಿ ಮೂಡಿಸಿದೆ. 

ಜನ ಸಾವಿರ ಲಕ್ಷ ಕೊಟ್ರು ಈ 20 ಸಾವಿರ ರೂ. ದೊಡ್ಡದು ಎಂದು ಇದೀಗ ವೃದ್ಧೆ ಭಿಕ್ಷುಕಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. . 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News