ಕೃಷಿ ಸಚಿವರಿಗೆ ಫೋಟೋಶೂಟ್ ಚಿಂತೆ, ಸರ್ಕಾರಕ್ಕೆ ಶೇ.4ಂ ಕಮಿಷನ್ ಚಿಂತೆ: ಬಿಜೆಪಿ ವಿರುದ್ಧ ಕಾಂಗ್ರೆಸ್ ಟೀಕೆ

Update: 2021-11-28 07:18 GMT

ಬೆಂಗಳೂರು: 'ರಾಜ್ಯದ ರೈತರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಕೃಷಿ ಸಚಿವರು ಫೋಟೋಶೂಟ್ ಚಿಂತೆಯಲ್ಲಿದ್ದರೆ, ರಾಜ್ಯ ಬಿಜೆಪಿ ಸರ್ಕಾರ ಶೇ.4ಂ ಕಮಿಷನ್ ಚಿಂತೆಯಲ್ಲಿದೆ' ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಟೀಕಿಸಿದೆ. 

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ''ರಾಜ್ಯದ ರೈತರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಗೊಬ್ಬರದ ಕೊರತೆ, ಬೆಲೆ ಏರಿಕೆಯಿಂದ ದುಬಾರಿ ಕೃಷಿ, ಮಳೆಯಿಂದ ಬೆಳೆ ಹಾನಿ, ಈಗ ಅಳಿದುಳಿದ ಬೆಳೆಗಳಿಗೆ ರೋಗ ಬಾಧೆ. ನಿರಂತರ ಸಂಕಷ್ಟದಲ್ಲಿರುವ ರೈತರ ನೆರವಿಗೆ ಸಮರೋಪಾಧಿಯಲ್ಲಿ ಕೆಲಸ ಮಾಡಬೇಕಿದೆ, ಆದರೆ ಕೃಷಿ ಸಚಿವರಿಗೆ ಫೋಟೋಶೂಟ್ ಚಿಂತೆ, ಸರ್ಕಾರಕ್ಕೆ 40% ಕಮಿಷನ್ ಚಿಂತೆ!''  ಎಂದು ಟೀಕಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News