ವಿಜಯಪುರ: ಕೆಎಸ್ಸಾರ್ಟಿಸಿ ಬಸ್- ಕಾರು ಢಿಕ್ಕಿ; ನಾಲ್ವರು ಸ್ಥಳದಲ್ಲೇ ಮೃತ್ಯು
Update: 2021-11-28 18:08 GMT
ವಿಜಯಪುರ: ಕೆಎಸ್ಸಾರ್ಟಿಸಿ ಬಸ್ ಮತ್ತು ಕಾರೊಂದು ಮುಖಾ-ಮುಖಿ ಢಿಕ್ಕಿಯಲ್ಲಿ ವಿಜಯಪುರ ನಾಗಠಾಣ ಶಾಸಕ ದೇವಾನಂದ್ ಚವ್ಹಾಣ್ ಅಳಿಯ ಸೇರಿದಂತೆ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ವಿಜಯಪುರದ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ನಡೆದಿದೆ.
ಮೃತರನ್ನು ನಾಗಠಾಣ ಶಾಸಕ ದೇವಾನಂದ್ ಚವ್ಹಾಣ್ ಅವರ ಅಳಿಯ ವಿಜಯಕುಮಾರ್ ದೊಡಮನಿ, ಸೋಲಾಪುರದ ನಾಂದೇಢದ ಚಿದಾನಂದ ನಾಗೇಶ್ ಸೂರ್ಯವಂಶಿ, ಸೊಲ್ಲಾಪುರದ ರಾಜೂರ ಗ್ರಾಮದ ಸೋಮನಾಥ ಕಾಳೆ, ಸೊಲ್ಲಾಪುರದ ಬಸವನಗರ ನಿವಾಸಿ ಸಂದೀಪ್ ಪವಾರ್ ಎಂದು ಗುರುತಿಸಲಾಗಿದೆ.
ಇನ್ನು ಬಸ್ನಲ್ಲಿದ್ದ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.
ವಿಜಯಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ.