ರಾಜ್ಯದ 11 ಕೆಎಎಸ್ ಅಧಿಕಾರಿಗಳಿಗೆ ಐಎಎಸ್‍ಗೆ ಭಡ್ತಿ

Update: 2021-11-29 15:28 GMT

ಬೆಂಗಳೂರು, ನ.29: ರಾಜ್ಯದ 11 ಕೆಎಎಸ್ ಅಧಿಕಾರಿಗಳಿಗೆ ಐಎಎಸ್ ಅಧಿಕಾರಿಗಳನ್ನಾಗಿ ಭಡ್ತಿ ನೀಡುವಂತೆ ಸಲ್ಲಿಸಲಾಗಿದ್ದ ಶಿಫಾರಸ್ಸಿಗೆ ರಾಷ್ಟ್ರಪತಿ ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ.

ಕೆಎಎಸ್ ಅಧಿಕಾರಿಗಳಾದ ಚಂದ್ರಶೇಖರ್ ಎನ್., ಬಸವರಾಜು ಎ.ಬಿ., ಶಿಲ್ಪಾ ಎಂ., ನವೀನ್ ಕುಮಾರ್ ರಾಜು ಎಸ್., ಡಾ.ಮಹೇಶ್ ಎಂ., ಸೋಮಶೇಖರ್ ಎಸ್.ಜೆ., ಡಾ.ವಾಸಂತಿ ಅಮರ್ ಬಿ.ವಿ., ಲಿಂಗಮೂರ್ತಿ ಜಿ., ರಂಗಪ್ಪ ಎಸ್., ಪ್ರಸನ್ನ ಎಚ್. ಹಾಗೂ ಇಬ್ರಾಹಿಮ್ ಮೈಗೂರ್ ಅವರಿಗೆ ಐಎಎಸ್‍ಗೆ ಭಡ್ತಿ ಲಭ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News