ಬಿಜೆಪಿಯ ಯೋಜನೆಗಳಲ್ಲಿ ಪ್ರಚಾರವಿರುತ್ತದೆಯೇ ಹೊರತು ಪ್ರಯೋಜನವಿರುವುದಿಲ್ಲ: ಕಾಂಗ್ರೆಸ್ ಟೀಕೆ

Update: 2021-11-29 17:06 GMT

ಬೆಂಗಳೂರು: ಬಿಜೆಪಿಯ ಯೋಜನೆಗಳಲ್ಲಿ ಪ್ರಚಾರವಿರುತ್ತದೆಯೇ ಹೊರತು ಪ್ರಯೋಜನವಿರುವುದಿಲ್ಲ ಎಂದು ಸರಕಾರದ 'ಆಯುಷ್ಮಾನ್ ಭಾರತ್' ಯೋಜನೆಯನ್ನು ಉಲ್ಲೇಖಿಸಿ ಕಾಂಗ್ರೆಸ್ ಟೀಕಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, 'ಆಯುಷ್ಮಾನ್ ಭಾರತ್' ಎಂಬುದನ್ನು ಮಹಾ ಸಾಧನೆ ಎಂಬಂತೆ ಬಿಂಬಿಸಿತ್ತು ಬಿಜೆಪಿ, ಆದರೆ ಅದರ ಅಸಲಿತನವೇ ಬೇರೆ. ರಾಜ್ಯದಲ್ಲಿ ಕೇವಲ 60 ಮಂದಿಗೆ ಮಾತ್ರ 3 ಲಕ್ಷ ವೆಚ್ಚದ ಚಿಕಿತ್ಸೆ ದೊರಕಲು ಸಾಧ್ಯವಾಗಿದೆ ಎಂದರೆ ಈ ಯೋಜನೆ ಕೇವಲ 'ಕನ್ನಡಿಯೊಳಗಿನ ಗಂಟು' ಎಂಬುದು ಸತ್ಯ. ಬಿಜೆಪಿಯ ಯೋಜನೆಗಳಲ್ಲಿ ಪ್ರಚಾರವಿರುತ್ತದೆಯೇ ಹೊರತು ಪ್ರಯೋಜನವಿರುವುದಿಲ್ಲ. ಎಂದು ಲೇವಡಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News