ಶಿವಮೊಗ್ಗ: ತಾನು ಸಾಕಿದ ಹಸುಗಳ ವಿರುದ್ಧವೇ ಪೊಲೀಸ್ ಠಾಣೆಯ ಮೆಟ್ಟಿಲೇರಿದ ರೈತ!

Update: 2021-12-04 10:43 GMT
ಸಾಂದರ್ಭಿಕ ಚಿತ್ರ

ಶಿವಮೊಗ್ಗ,ಡಿ.04:  ತಾನು ಸಾಕಿದ ಹಸುಗಳ ವಿರುದ್ಧವೇ ರೈತನೋರ್ವ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನಲ್ಲಿ ನಡೆದಿದೆ.

ಹೊಳೆಹೊನ್ನೂರಿನ ಸಿದ್ಲಿಪುರ ಗ್ರಾಮದ ರಾಮಯ್ಯ ಎಂಬವರೇ ಈ ರೈತ ತಾನು ಸಾಕಿದ ಹಸುಗಳು ಸರಿಯಾಗಿ ಹಾಲು ಕೊಡದೆ ಒದಿಯುತ್ತಿವೆ, ನೀವೇ ಬುದ್ದಿ ಹೇಳಿ ಎಂದು ಹೊಳೆಹೊನ್ನೂರು ಪೊಲೀಸರಿಗೆ ದೂರು ನೀಡಿದ ವಿಚಿತ್ರ ಪ್ರಸಂಗ ನಡೆದಿದೆ.

ತಾನು ಸಾಕಿದ್ದ ನಾಲ್ಕು ಹಸುಗಳನ್ನು ದಿನ ಬೆಳಿಗ್ಗೆ ಎಂಟು ಗಂಟೆಯಿಂದ 11 ಗಂಟೆವರೆಗೂ ಹಾಗೂ ಸಂಜೆ ನಾಲ್ಕು ಗಂಟೆಯಿಂದ ಆರು ಗಂಟೆವರೆಗೂ ತುಂಬಾ ಚೆನ್ನಾಗಿ ಮೇಯಿಸಿಕೊಂಡು ಬರುತ್ತಿದ್ದೇನೆ. ಆದರೆ ಕಳೆದ ನಾಲ್ಕೈದು ದಿನಗಳಿಂದ ಹಾಲನ್ನು ಕರೆಯಲು ಹೋದರೆ ಆ ಹಸುಗಳು ಹಾಲನ್ನು ಕೊಡದೆ ಸುಖಾಸುಮ್ಮನೆ ಕಾಲಿಂದ ಜಾಡಿಸಿ ಒದೆಯುತ್ತಿವೆ. ಆ ಹಸುಗಳು ತನಗೂ ಹಾಗೂ ತನ್ನ ಪತ್ನಿ ರತ್ನಮ್ಮ ರಿಗೂ ಹಾಲನ್ನು ಸರಿಯಾಗಿ ಕೊಡುತ್ತಿಲ್ಲ ಎಂದು ರೈತ ರಾಮಯ್ಯ ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News