ಎಸಿಬಿ ದಾಳಿ: ಲಂಚ ಪಡೆಯುತ್ತಿದ್ದ ಕೃಷಿ ವಿವಿ ಅಧಿಕಾರಿ ಬಂಧನ
Update: 2021-12-04 17:18 GMT
ಶಿವಮೊಗ್ಗ,ಡಿ.4: ಬಾಡಿಗೆ ವಾಹನದ ಹಣ ಬಿಡುಗಡೆಗೆ ಲಂಚ ಕೇಳಿದ ಕೃಷಿ ವಿವಿ ಹಣಕಾಸು ಅಧಿಕಾರಿಯನ್ನು ಎಸಿಬಿ ಅಧಿಕಾರಿಗಳು ಬಂಧಿಸಿ ವಶಕ್ಕೆ ಪಡೆದಿದ್ದಾರೆ. ವಿವಿಯ ಹಣಕಾಸು ವಿಭಾಗದ ಗಣೇಶಪ್ಪ ಬಂಧಿತ.
ಕೃಷಿ ವಿವಿಯಲ್ಲಿ ನವೀನ್ ಎಂಬುವರು ವಾಹನಗಳನ್ನು ಬಾಡಿಗೆ ಬಿಟ್ಟಿದ್ದು ಅದರ ಹಣವನ್ನು ಬಿಡುಗಡೆ ಮಾಡಬೇಕಿತ್ತು. 1 ಲಕ್ಷ ಬಿಲ್ ಬಿಡುಗಡೆಗೆ 5 ಸಾವಿರ ಲಂಚ ಡಿಮ್ಯಾಂಡ್ ಮಾಡಲಾಗಿತ್ತು. 5 ಸಾವಿರ ರೂ. ಹಣ ಪಡೆಯುವಾಗ ಸೂಕ್ತ ಮಾಹಿತಿ ಆಧಾರದ ಮೇರೆಗೆ ದಾಳಿ ಮಾಡಿದ ಅಧಿಕಾರಿಗಳು ಗಣೇಶಪ್ಪನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.