ಪಿಸ್ತೂಲು ತೋರಿಸಿ ಬೆದರಿಕೆ ಆರೋಪ: ಜೆಡಿಎಸ್ ಪರಿಷತ್ ಅಭ್ಯರ್ಥಿ ವಿರುದ್ಧ ದೂರು

Update: 2021-12-06 16:28 GMT

ಬೆಂಗಳೂರು, ಡಿ.6: ವಿಧಾನ ಪರಿಷತ್ತಿನ ಚುನಾವಣಾ ಕಣದಲ್ಲಿರುವ ಜೆಡಿಎಸ್ ಅಭ್ಯರ್ಥಿ ರಮೇಶ್‍ಗೌಡ ಅವರು ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರಿಗೆ ಪಿಸ್ತೂಲಿನಿಂದ ಬೆದರಿಕೆವೊಡ್ಡಿರುವ ಗಂಭೀರ ಆರೋಪ ಕೇಳಿಬಂದಿದೆ.

ಘಟನೆ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸುನೀಲ್ ಎಂಬುವರ ಕುಟಂಬಸ್ಥರಿಗೆ ರಮೇಶ್‍ಗೌಡ ಪಿಸ್ತೂಲಿನಿಂದ ಬೆದರಿಸಿದ್ದಾರೆ. ಜೊತೆಗೆ, ಸಿಸಿಬಿ ಅಧಿಕಾರಿ ಹೆಸರು ಹೇಳಿಕೊಂಡು ಜಯಂತ್‍ಕುಮಾರ್ ಎಂಬಾತನೂ ಬೆದರಿಕೆವೊಡ್ಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News