ಮಂಡ್ಯ: ಮಗು ಸಮೇತ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ

Update: 2021-12-18 14:46 GMT
ಭಾರ್ಗವಿ

ಮಂಡ್ಯ, ಡಿ.18: ತಾಯಿ ತನ್ನ ಮಗುವಿನ ಜತೆ ಶ್ರೀರಂಗಪಟ್ಟಣದ ಗೋಸಾಯ್ ಘಾಟ್ ಬಳಿ ಕಾವೇರಿನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೈಸೂರಿನ ಹೂಟಗಳ್ಳಿ ನಿವಾಸಿ ಪ್ರದೀಪ್‌ಕುಮಾರ್ ಪತ್ನಿ ಭಾರ್ಗವಿ(31) ಹಾಗೂ ಮಗಳು ದೀಕ್ಷಾ(3) ಆತ್ಮಹತ್ಯೆ ಮಾಡಿಕೊಂಡವರು. ಶುಕ್ರವಾರ ಸಂಜೆ ಭಾರ್ಗವಿ ಮಗುವಿನೊಂದಿಗೆ ನದಿಗೆ ಹಾರಿದ್ದು, ಶನಿವಾರ ಬೆಳಗ್ಗೆ ಮೃತದೇಹಗಳು ಪತ್ತೆಯಾಗಿವೆ.

ಶ್ರೀರಂಗಪಟ್ಟಣ ತಾಲೂಕು ದೇವೇಗೌಡನಕೊಪ್ಪಲು ಗ್ರಾಮದ ಭಾರ್ಗವಿ ಅವರನ್ನು ಪಾಂಡವಪುರ ತಾಲೂಕು ಲಕ್ಮೀಸಾಗರ ಗ್ರಾಮದ ಪ್ರದೀಪ್‌ಕುಮಾರ್‌ಗೆ 5 ವರ್ಷದ ಹಿಂದೆ ಮದುವೆ ಮಾಡಲಾಗಿತ್ತು. ಕುಟುಂಬ ಮೈಸೂರಿನ ಹೂಟಗಳ್ಳಿಯಲ್ಲಿ ವಾಸವಿತ್ತು ಎನ್ನಲಾಗಿದೆ.

ಶ್ರೀರಂಗಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News