ತುರ್ತು ಪರಿಸ್ಥಿತಿ ಹೇರಿದ ರಾಜಕೀಯ ಕುಟುಂಬದ ಹಿಂಬಾಲಕರಲ್ಲವೇ ನೀವು: ಡಿಕೆಶಿಗೆ ಬಿಜೆಪಿ ತಿರುಗೇಟು
ಬೆಂಗಳೂರು: ''ಡಿ.ಕೆ ಶಿವಕುಮಾರ್ ಅವರೇ, ನೀವು ಸದನದಲ್ಲಿ ಮತಾಂತರ ನಿಷೇಧ ಮಸೂದೆಯ ಪ್ರತಿಯನ್ನು ಹರಿದು ಹಾಕಿದಿರಿ. ಏಕೆಂದರೆ ನಿಮಗಾಗಲಿ, ನಿಮ್ಮ ಅಧಿನಾಯಕ ರಾಹುಲ್ ಗಾಂಧಿಯವರಿಗಾಗಲಿ ಸಂಸದೀಯ ವ್ಯವಸ್ಥೆ ಹಾಗೂ ನಡಾವಳಿಯಲ್ಲಿ ನಂಬಿಕೆಯೇ ಇಲ್ಲ. ಎಷ್ಟಾದರೂ, ತುರ್ತು ಪರಿಸ್ಥಿತಿ ಹೇರಿದ ರಾಜಕೀಯ ಕುಟುಂಬದ ಹಿಂಬಾಲಕರಲ್ಲವೇ ನೀವು'' ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ "ಕಾಂಗ್ರೆಸ್ ನಾಯಕರು ತಮಗೆ ಅನುಕೂಲಕರ ವಾತಾವರಣ ಇಲ್ಲವೆಂದಾದರೆ ವಿಧೇಯಕದ ಪ್ರತಿಯಷ್ಟೇ ಅಲ್ಲ, ಸದನದ ನಿಯಮಾವಳಿಗಳನ್ನೇ ಹರಿದು ಬಿಸಾಡಬಲ್ಲರು. ಏಕೆಂದರೆ ಡಿ.ಕೆ ಶಿವಕುಮಾರ್ ಅವರಂತವರಿಗೆ ಸದನ, ವ್ಯವಸ್ಥೆ, ನಿಯಮ ಇತ್ಯಾದಿಗಳ ಮೇಲೆ ಗೌರವವೇ ಇಲ್ಲ. ಹೇಗಾದರೂ ಮಾಡಿ ಸೋನಿಯಾ ಗಾಂಧಿಯ ಮೆಚ್ಚುಗೆ ಗಳಿಸಬೇಕೆಂಬುದಷ್ಟೇ ಅವರ ನಿಮ್ಮ ಧ್ಯೇಯ'' ಎಂದು ಹೇಳಿದೆ.
''ಡಿಕೆಶಿ ಅವರು ಕನಕಪುರದ ಬೆಟ್ಟದ ಮೇಲೆ ಸಂಬಂಧವೇ ಇಲ್ಲದ ವಿಗ್ರಹವೊಂದನ್ನು ಸ್ಥಾಪನೆ ಮಾಡಲು ಹೊರಟಿದ್ದರು. ಇದೆಲ್ಲ ಯಾರನ್ನು ಓಲೈಸುವುದಕ್ಕಾಗಿ?, ಅಧಿನಾಯಕಿ ಆಂಟೋನಿಯೋ ಮೈನೋ ಮೆಚ್ಚುಗೆ ಗಳಿಸುವುದಕ್ಕಾಗಿಯೇ? ಮಾನ್ಯ ಡಿ.ಕೆ ಶಿವಕುಮಾರ್ ಅವರೇ, ನಿಮಗೆ ಸ್ವಧರ್ಮ, ರಾಷ್ಟ್ರಧರ್ಮದ ಮೇಲೆ ಕಿಂಚಿತ್ತಾದರೂ ನಂಬಿಕೆ ಇದೆಯೇ?'' ಎಂದು ಪ್ರಶ್ನಿಸಿದೆ.
ಮಾನ್ಯ @DKShivakumar ಅವರೇ,
— BJP Karnataka (@BJP4Karnataka) December 22, 2021
ನೀವು ಸದನದಲ್ಲಿ #AntiConversionBill ಪ್ರತಿಯನ್ನು ಹರಿದು ಹಾಕಿದಿರಿ.
ಏಕೆಂದರೆ ನಿಮಗಾಗಲಿ, ನಿಮ್ಮ ಅಧಿನಾಯಕ ರಾಹುಲ್ ಗಾಂಧಿಯವರಿಗಾಗಲಿ ಸಂಸದೀಯ ವ್ಯವಸ್ಥೆ ಹಾಗೂ ನಡಾವಳಿಯಲ್ಲಿ ನಂಬಿಕೆಯೇ ಇಲ್ಲ.
ಎಷ್ಟಾದರೂ, ತುರ್ತು ಪರಿಸ್ಥಿತಿ ಹೇರಿದ ರಾಜಕೀಯ ಕುಟುಂಬದ ಹಿಂಬಾಲಕರಲ್ಲವೇ ನೀವು. pic.twitter.com/SxRXxf1A95