ದುಬೈ ಪ್ರವಾಸ ತೆರಳಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ

Update: 2021-12-24 12:26 GMT
ಫೈಲ್ ಚಿತ್ರ

ಬೆಳಗಾವಿ, ಡಿ. 24: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪವರು ಕುಟುಂಬ ಸಮೇತ ಐದು ದಿನಗಳ ಕಾಲ ವಿದೇಶ ಪ್ರವಾಸ ಕೈಗೊಂಡಿದ್ದಾರೆ.

ದುಬೈ ಕನ್ನಡ ಸಂಘದ ಆಹ್ವಾನದ ಹಿನ್ನೆಲೆಯಲ್ಲಿ ಅಲ್ಲಿನ ಕನ್ನಡ ಶಾಲೆಯೊಂದನ್ನು ಉದ್ಘಾಟಿಸಲಿರುವ ಯಡಿಯೂರಪ್ಪನವರು, ಇಂದಿನಿಂದ ಐದು ದಿನಗಳ ಕಾಲ ಕುಟುಂಬದೊಂದಿಗೆ ದುಬೈನಲ್ಲಿ ಕಾಲ ಕಳೆಯಲಿದ್ದಾರೆ.

ಬೆಂಗಳೂರಿನ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಪ್ರವಾಸ ಬೆಳೆಸಲಿದ್ದು, ಕುಟುಂಬದೊಂದಿಗೆ ವಿದೇಶ ಪ್ರವಾಸ ತೆರಳುತ್ತಿದ್ದು, ಮೂರ್ನಾಲ್ಕು ದಿನ ಇದ್ದು ಬರುತ್ತೇನೆ ಎಂದು ಅವರು ತಿಳಿಸಿದ್ದಾರೆ.

15 ದಿನಗಳ ನಂತರ ಪ್ರತಿಯೊಂದು ಜಿಲ್ಲೆಗೂ ಸಂಘಟನೆ ಬಲಪಡಿಸಲು ಒಂದೊಂದು ದಿನ ಪ್ರವಾಸ ಕೈಗೊಳ್ಳುತ್ತೇನೆ. ಮುಂದಿನ ಚುನಾವಣೆಯಲ್ಲಿ 140 ಸ್ಥಾನಗಳನ್ನು ಗೆದ್ದು ಮುಂದೆ ಬಿಜೆಪಿ ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ ಎಂದು ಯಡಿಯೂರಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News