ಪರಿಹಾರ ಕೊಡಲಾಗದ ಸರಕಾರ ರೈತರ ಅರ್ಜಿಯಲ್ಲೂ ದೋಷ ಹುಡುಕುತ್ತಿದೆ: ಕಾಂಗ್ರೆಸ್ ಟೀಕೆ

Update: 2021-12-26 11:32 GMT

ಬೆಂಗಳೂರು, ಡಿ. 26: `ಕುಣಿಯಲಾರದವ ನೆಲ ಡೊಂಕು' ಎನ್ನುವಂತೆ, ಪರಿಹಾರ ಕೊಡಲಾಗದ ಸರಕಾರಕ್ಕೆ ರೈತರ ಅರ್ಜಿಯಲ್ಲೂ ಕೊಂಕು ಹುಡುಕುತ್ತಿದೆ' ಎಂದು ರಾಜ್ಯ ಸರಕಾರವನ್ನು ಕಾಂಗ್ರೆಸ್ ಟೀಕಿಸಿದೆ.

ರವಿವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, `ನೆರೆ ಹಾವಳಿಯಿಂದ ಬೆಳೆ ನಷ್ಟಕ್ಕೆ ಒಳಗಾಗಿರುವ ರೈತರಿಗೆ ಪರಿಹಾರ ನೀಡಲು ಯೋಗ್ಯತೆ ಇಲ್ಲದ ಸರಕಾರ ರೈತರ ಅರ್ಜಿಯಲ್ಲಿ ಸಣ್ಣ ಪುಟ್ಟ ದೋಷಗಳನ್ನು ನೆಪವಾಗಿಟ್ಟುಕೊಂಡು ತಿರಸ್ಕರಿಸುತ್ತಿರುವುದು ಅಕ್ಷಮ್ಯ. ಅರ್ಜಿ ಪ್ರಕ್ರಿಯೆಯನ್ನು ಸರಳಿಕರಿಸುವತ್ತ ಕೃಷಿ ಸಚಿವರು ಗಮನ ಹರಿಸಬೇಕು ಎಂದು ಒತ್ತಾಯಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News