ಯಾವುದೇ ಕಾರಣಕ್ಕೂ ಲಾಕ್ ಡೌನ್, ಕಠಿಣ ನಿಯಮ ಬೇಡ: ಸಂಸದ ಪ್ರತಾಪ್ ಸಿಂಹ

Update: 2022-01-17 09:55 GMT

ಮೈಸೂರು: ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿ ಇಂದು ಸಂಜೆ ಮತ್ತೆ ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಯಾವುದೇ ಕಾರಣಕ್ಕೂ ಲಾಕ್ ಡೌನ್, ಕಠಿಣ ನಿಯಮಗಳು ಬೇಡ  ಎಂದು ಮೈಸೂರು-ಕೊಡಗು ಸಂಸದ ತಾಪ್ ಸಿಂಹ ಸರಕಾರಕ್ಕೆ ಒತ್ತಾಯಿಸಿದ್ದಾರೆ. 

ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿರುವ ಅವರು, ''ಈಗಾಗಲೇ ಜನರ ಜೀವನ ದುಸ್ಥರವಾಗಿದ್ದು, ಕೋವಿಡ್ ಸೋಂಕು ಹರಡದಂತೆ ಆಸ್ಪತ್ರೆಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತ ನಿಯಮಗಳನ್ನು ಹೊರತುಪಡಿಸಿ ಲಾಕ್ ಡೌನ್ ನಂತಹ ಯಾವುದೇ ಕಠಿಣ ನಿಯಮಗಳು ಬೇಡ''  ಎಂದು ಹೇಳಿದರು. 

''ಮೂರನೇ ಅಲೆಯಲ್ಲಿ ಜನರ ಜೀವಕ್ಕೆ ಯಾವುದೇ ಅಪಾಯ ಇಲ್ಲ, ಆದ್ದರಿಂದ  ಸರಕಾರ ಬಹಳ ಸಂವೇದನೆಯಿಂದ ಜನರ ಬದುಕನ್ನು ದೃಷ್ಟಿಯಲ್ಲಿಟ್ಟುಕೊಂಡು ಕ್ರಮಕೈಗೊಳ್ಳಬೇಕೆಂದು '' ಪ್ರತಾಪ್ ಸಿಂಹ ಸರಕಾರವನ್ನು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News