ಭಾವಿ ಪರ್ಯಾಯ ಕೃಷ್ಣಾಪುರ ಸ್ವಾಮೀಜಿಯ ಮರಳಶಿಲ್ಪ ರಚನೆ
Update: 2022-01-17 14:42 GMT
ಉಡುಪಿ, ಜ.17: ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವದ ಪ್ರಯುಕ್ತ ಭಾವಿ ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ ಅವರ ಮರಳು ಶಿಲ್ಪಾ ಕೃತಿಯನ್ನು ಉಡುಪಿ ಸ್ಯಾಂಡ್ ಥೀಂ ತಂಡ ಇಂದು ಮಲ್ಪೆ ಕಡಲ ತೀರದಲ್ಲಿ ರಚಿಸಿತು.
ಉತ್ಸವ ಮೂರ್ತಿ ಎಂಬ ಭಾವ ಶಿಲ್ಪದ ಮೂಲಕ ಸಾಂಕೇತಿಕ ರೂಪ ದೊಂದಿಗೆ ಶುಭಸಂಶನೆ ಕೋರುವ ಸಲುವಾಗಿ ಕಲಾವಿದರಾದ ಹರೀಶ್ ಸಾಗಾ, ಜೈ ನೇರಳಕಟ್ಟೆ, ಸಂತೋಷ್ ಭಟ್ ಸುಮಾರು 4x7 ಅಡಿ ವಿಸ್ತ್ರೀರ್ಣದ ಕಲಾಕೃತಿಯನ್ನು ರಚಿಸಿದರು.