ರಾಜ್ಯದಲ್ಲಿಂದು 27,156 ಮಂದಿಗೆ ಕೊರೋನ ದೃಢ, 14 ಮಂದಿ ಮೃತ್ಯು
ಬೆಂಗಳೂರು, ಜ.17: ರಾಜ್ಯದಲ್ಲಿ ಸೋಮವಾರ 27,156 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 14 ಮಂದಿ ಸೋಂಕಿಗೆ ಬಲಿಯಾಗಿದ್ದು, 7,827 ಜನರು ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 3247243ಕ್ಕೆ ತಲುಪಿದೆ. ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 38,445ಕ್ಕೆ ತಲುಪಿದೆ.
ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 2,17,297ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.
14 ಮಂದಿ ಸಾವು: ಬೆಂಗಳೂರು ನಗರ 5, ಚಿಕ್ಕಬಳ್ಳಾಪುರ 1, ಚಿತ್ರದುರ್ಗ 1, ದಕ್ಷಿಣ ಕನ್ನಡ 3, ಧಾರವಾಡ 1, ಕಲಬುರಗಿ 1, ರಾಮನಗರ 1, ತುಮಕೂರು ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.
ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 27,156 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 82, ಬಳ್ಳಾರಿ 560, ಬೆಳಗಾವಿ 294, ಬೆಂಗಳೂರು ಗ್ರಾಮಾಂತರ 538, ಬೆಂಗಳೂರು ನಗರ 15,947, ಬೀದರ್ 75, ಚಾಮರಾಜನಗರ 101, ಚಿಕ್ಕಬಳ್ಳಾಪುರ 209, ಚಿಕ್ಕಮಗಳೂರು 236, ಚಿತ್ರದುರ್ಗ 178, ದಕ್ಷಿಣ ಕನ್ನಡ 490, ದಾವಣಗೆರೆ 121, ಧಾರವಾಡ 784, ಗದಗ 71, ಹಾಸನ 1050, ಹಾವೇರಿ 27, ಕಲಬುರಗಿ 479, ಕೊಡಗು 137, ಕೋಲಾರ 463, ಕೊಪ್ಪಳ 89, ಮಂಡ್ಯ 917, ಮೈಸೂರು 1770, ರಾಯಚೂರು 140, ರಾಮನಗರ 96, ಶಿವಮೊಗ್ಗ 364, ತುಮಕೂರು 1147, ಉಡುಪಿ 442, ಉತ್ತರ ಕನ್ನಡ 203, ವಿಜಯಪುರ 128, ಯಾದಗಿರಿ ಜಿಲ್ಲೆಯಲ್ಲಿ 18 ಪ್ರಕರಣ ಪತ್ತೆಯಾಗಿವೆ.
ರಾಜಧಾನಿಯಲ್ಲಿ 15,947 ಜನರಿಗೆ ಕೊರೋನ ದೃಢ
ಜ.17: ರಾಜಧಾನಿಯಲ್ಲಿ ಸೋಮವಾರದಂದು 15,947 ಜನರಿಗೆ ಕೊರೋನ ಸೋಂಕು ದೃಢಪಟ್ಟಿವೆ. 5 ಮಂದಿ ಸೋಂಕಿಗೆ ಬಲಿಯಾಗಿದ್ದು, ಒಟ್ಟು 12,59,041 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ನಗರದಲ್ಲಿ ಇಲ್ಲಿಯವರೆಗೆ ಒಟ್ಟು 14,32,754 ಕೊರೋನ ಸೋಂಕಿತರು ದೃಢಪಟ್ಟಿದ್ದು, ಒಟ್ಟು 16,458 ಜನರು ಸೋಂಕಿಗೆ ಬಲಿಯಾಗಿದ್ದಾರೆ.
ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳಲ್ಲಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
287 ಮಂದಿಗೆ ಒಮೈಕ್ರಾನ್
‘ಸತತ ಒಂದು ವಾರದಿಂದ ಹೈರಿಸ್ಕ್ ದೇಶಗಳಿಂದ ಸುಮಾರು 24,836 ಪ್ರಯಾಣಿಕರು ಆಗಮಿಸಿದ್ದು, ಅವರಲ್ಲೇ ರೂಪಾಂತರಿ ಪತ್ತೆಯಾಗಿರುವುದು ಕಂಡು ಬಂದಿದೆ. ಇದರಲ್ಲೂ ಹೆಚ್ಚಾಗಿ ಬೆಂಗಳೂರು ನಗರದಲ್ಲೇ ಸೋಮವಾರದಂದು 287 ಜನರಿಗೆ ಒಮೈಕ್ರಾನ್ ಸೋಂಕು ತಗುಲಿದೆ. ರಾಜ್ಯದಲ್ಲಿ ಈವರೆಗೆ ಒಮೈಕ್ರಾನ್ ಪ್ರಕರಣಗಳ ಸಂಖ್ಯೆ 766ಕ್ಕೆ ತಲುಪಿದೆ.’
-ಡಾ.ಕೆ.ಸುಧಾಕರ್, ಆರೋಗ್ಯ ಸಚಿವ