ಕೋವಿಡ್ ಪರಿಹಾರ ನೀಡುವ ವಿಚಾರದಲ್ಲಿ ಸರ್ಕಾರ ಬೇಕಂತಲೇ ಗೊಂದಲಗಳನ್ನು ಸೃಷ್ಟಿಸುತ್ತಿದೆ: ಕಾಂಗ್ರೆಸ್ ಆರೋಪ
ಬೆಂಗಳೂರು: 'ಕೋವಿಡ್ ಪರಿಹಾರ ನೀಡುವ ವಿಚಾರದಲ್ಲಿ ಬಿಜೆಪಿ ಸರ್ಕಾರ ಬೇಕಂತಲೇ ಗೊಂದಲಗಳನ್ನು ಸೃಷ್ಟಿಸುತ್ತಿದೆ' ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ''ಕೊರೋನದಿಂದ ಮೃತರಾದವರ ಕುಟುಂಬಕ್ಕೆ ಪರಿಹಾರ ನೀಡುವ ವಿಚಾರದಲ್ಲಿ ಬಿಜೆಪಿ ಸರ್ಕಾರ ಹಲವು ಗೊಂದಲಗಳನ್ನು ಬೇಕಂತಲೇ ಸೃಷ್ಟಿಸುತ್ತಿದೆ. ಮೃತರ ಕುಟುಂಬಕ್ಕೆ ಪರಿಹಾರದ ನೀಡಿದ ಚೆಕ್ ಬೌನ್ಸ್ ಆಗುತ್ತಿವೆ, ಸಂತ್ರಸ್ತರ ಸಂಕಟವನ್ನು ಸರ್ಕಾರ ಅಣಕಿಸುವ ಪರಿ ಇದು'' ಎಂದು ವಾಗ್ದಾಳಿ ನಡೆಸಿದೆ.
''ಸರ್ಕಾರ ಕೂಡಲೇ ನ್ಯೂನ್ಯತೆಗಳನ್ನು ಸರಿಪಡಿಸಿ ಪರಿಹಾರ ದೊರಕುವಂತೆ ಕ್ರಮ ಕೈಗೊಳ್ಳಬೇಕು'' ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಕರೋನಾದಿಂದ ಮೃತರಾದವರ ಕುಟುಂಬಕ್ಕೆ ಪರಿಹಾರ ನೀಡುವ ವಿಚಾರದಲ್ಲಿ ಬಿಜೆಪಿ ಸರ್ಕಾರ ಹಲವು ಗೊಂದಲಗಳನ್ನು ಬೇಕಂತಲೇ ಸೃಷ್ಟಿಸುತ್ತಿದೆ.
— Karnataka Congress (@INCKarnataka) January 21, 2022
ಮೃತರ ಕುಟುಂಬಕ್ಕೆ ಪರಿಹಾರದ ನೀಡಿದ ಚೆಕ್ ಬೌನ್ಸ್ ಆಗುತ್ತಿವೆ, ಸಂತ್ರಸ್ತರ ಸಂಕಟವನ್ನು ಸರ್ಕಾರ ಅಣಕಿಸುವ ಪರಿ ಇದು.
ಸರ್ಕಾರ ಕೂಡಲೇ ನ್ಯೂನ್ಯತೆಗಳನ್ನು ಸರಿಪಡಿಸಿ ಪರಿಹಾರ ದೊರಕುವಂತೆ ಕ್ರಮ ಕೈಗೊಳ್ಳಬೇಕು. pic.twitter.com/AucNfBgZ5z