2023ರಲ್ಲಿ ಜೆಡಿಎಸ್ ಬಿಟ್ಟು ಬೇರೆ ಯಾರದ್ದೂ ನಡೆಯಲ್ಲ: ಕುಮಾರಸ್ವಾಮಿ

Update: 2022-01-26 06:40 GMT

ಬೆಂಗಳೂರು: 'ಜೆಡಿಎಸ್ ಪಕ್ಷ ಯಾವುದೇ ಪಕ್ಷದ ಬಾಲಂಗೋಚಿ, ಜೆಡಿಎಸ್ ಅನ್ನು ಒದ್ದೋಡಿಸಬೇಕು ಎಂದೆಲ್ಲಾ ಹೇಳಿದಷ್ಟು ಜೆಡಿಎಸ್ ಇನ್ನಷ್ಟು ಗಟ್ಟಿಯಾಗಿ ಬೆಳೆಯುತ್ತದೆ' ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''2023ರಲ್ಲಿ ಜೆಡಿಎಸ್ ಬಿಟ್ಟು ಬೇರೆ ಇವರದ್ದು ಯಾರದ್ದೂ ನಡೆಯಲ್ಲ, ಈ ಪಕ್ಷವನ್ನು ಉಳಿಸಿ ಬೆಳೆಸಿರುವ ಒಂದು ವರ್ಗ ಇದೆ. ಅವರು ಎಂದೂ ಸಹ  ಈ ಪಕ್ಷವನ್ನು ಕೈ ಬಿಡುವುದಿಲ್ಲ'' ಎಂದು ಹೇಳಿದರು. 

''ನಮ್ಮ ಪಕ್ಷದಿಂದ ಯಾರು ಹೋಗುತ್ತಾರೆ ಎಂಬುದು ನನಗೆ ಗೊತ್ತಿದೆ. ಯಾರು ಹೋಗಬಹುದು ಎಂಬ ಮಾಹಿತಿ ನಮ್ಮಲ್ಲೂ ಇದೆ.  ನಮಗೆ ಅದರಿಂದ ಆತಂಕವೇನೂ ಇಲ್ಲ'' ಎಂದು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News