ಶಾಸಕ ಯತ್ನಾಳ್ ಗೆ ಸಚಿವ ಸ್ಥಾನ ಸಿಗಲಿದೆಯೇ?: ಉಮೇಶ್ ಕತ್ತಿ ಹೇಳಿದ್ದು ಹೀಗೆ...

Update: 2022-01-26 09:37 GMT

ವಿಜಯಪುರ: 'ಸಚಿವ ಸಂಪುಟ ಬದಲಾವಣೆ‌‌ ನಿರಂತರ ಜ್ಯೋತಿ ಇದ್ದಂತೆ. ಮಂತ್ರಿ ಮಂಡಲ‌ ಬದಲಾವಣೆ ಕಂಡು ಬರ್ತಿಲ್ಲ.ಆದ್ರೇ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಚಿವರಾಗೋದು ನಿಶ್ಚಿತ. ಯತ್ನಾಳ್ ರಿಗೆ ಸದ್ಯದಲ್ಲೆ‌ ಮಂತ್ರಿಗಿರಿ ಸಿಗಲಿದೆ'' ಎಂದು ವಿಜಯಪುರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹೇಳಿದರು.

ನಗರದಲ್ಲಿ ಮಾತನಾಡಿದ ಅವರು, ''ಕರ್ನಾಟಕ ರಾಜ್ಯದಲ್ಲೆ ನಮ್ಮನ್ನು ಬದಲಾವಣೆ ಮಾಡಿದ್ದಾರೆ. ಇನ್ನು ಉಸ್ತುವಾರಿ ಬದಲಾವಣೆಯಿಂದ‌ ಸಚಿವರಲ್ಲಿ ಯಾವುದೇ ಅಸಮಧಾನ ಇಲ್ಲ'' ಎಂದು ತಿಳಿಸಿದರು.

''ರಾಜ್ಯದಲ್ಲಿ 30 ಮಂತ್ರಿಗಳಿಗೆ ಜವಾಬ್ದಾರಿ‌ ಕೊಟ್ಟಿದ್ದಾರೆ. ನಾವ್ಯಾರು ಅಸಮಧಾನ ಇಲ್ಲ ಎಂದು ಸ್ಪಷ್ಟನೆ ನೀಡಿದರು. ನನಗೆ ಬಾಗಲಕೋಟೆಯಿಂದ‌ ವಿಜಯಪುರ ಕೊಟ್ಟರು ಇಲ್ಲಿಗೆ ಬಂದಿದ್ದೀನಿ ತಪ್ಪೇನಿದೆ. ನನ್ನನ್ನು ಇಂಡಿಯಾದಿಂದ ಪಾಕಿಸ್ತಾನಕ್ಕೇನು ಹಾಕಿಲ್ವಲ್ಲ''  ಎಂದು ಉಮೇಶ ಕತ್ತಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News