ಶಿವಮೊಗ್ಗ: ಗಂಡು ಸಿಂಹದ ಜೊತೆ ಕಾದಾಡಿ ಪ್ರಾಣ ಬಿಟ್ಟ ಸಿಂಹಿಣಿ!

Update: 2022-02-01 11:41 GMT

ಶಿವಮೊಗ್ಗ, ಫೆ.1 ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ಸಿಂಹಿಣಿ ಹನ್ನೊಂದು ವರ್ಷದ ಮಾನ್ಯ ಸಾವನ್ನಪ್ಪಿದೆ.

ಒಂದು ವಾರದ ಹಿಂದೆ ಯಶವಂತ್ ಎಂಬ ಸಿಂಹದ ಜೊತೆ ಕಾದಾಟ ನಡೆಸಿದ್ದ ಸಿಂಹಿಣಿ ಮಾನ್ಯ, ಘಟನೆಯಲ್ಲಿ ಗಂಭೀರ ಗಾಯಗೊಂಡಿತ್ತು.

ಒಂದು ವಾರದಿಂದ ಸತತ ಚಿಕಿತ್ಸೆ ನೀಡಿದರೂ, ಚಿಕಿತ್ಸೆ ಫಲಕಾರಿಯಾಗದೇ ಮಾನ್ಯ ಸೋಮವಾರ ರಾತ್ರಿ ಮೃತಪಟ್ಟಿದೆ.

ತ್ಯಾವರೆಕೊಪ್ಪ ಸಿಂಹಧಾಮದ ಸಿಬ್ಬಂದಿ ಕಾನೂನು ಪ್ರಕಾರ ಇಂದು ಮಾನ್ಯ ಅಂತಿಮ ಸಂಸ್ಕಾರ ನಡೆಸಿದ್ದಾರೆ. ಮಾನ್ಯ ಮೃತಪಟ್ಟಿದ್ದರಿಂದ ಸಿಂಹಧಾಮದ ಸಿಂಹಗಳ ಸಂಖ್ಯೆ ಐದಕ್ಕಿಳಿದಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News