ಮಡಿಕೇರಿ: ಕಾರುಗಳ ನಡುವೆ ಢಿಕ್ಕಿ; ಓರ್ವ ಮೃತ್ಯು

Update: 2022-02-05 15:20 GMT

ಮಡಿಕೇರಿ ಫೆ.5 : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ವೃದ್ಧರೊಬ್ಬರು ಮೃತಪಟ್ಟಿರುವ ಘಟನೆ ಟಿ.ಶೆಟ್ಟಿಗೇರಿ-ಬಿರುನಾಣಿ ರಸ್ತೆಯಲ್ಲಿ ನಡೆದಿದೆ. 

ವಗರೆ ಅಯ್ಯಪ್ಪ ದೇವಾಲಯದ ಮುಂಭಾಗದ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ಮಚ್ಚಮಾಡ ರಾಜು ಕುಟ್ಟಪ್ಪ(85) ಎಂಬುವವರೇ ಮೃತ ದುರ್ದೈವಿ. ಮತ್ತೊಂದು ಕಾರಿನಲ್ಲಿದ್ದ ಇಬ್ಬರಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ತೀವ್ರತೆಗೆ ಎರಡೂ ಕಾರುಗಳ ಮುಂಭಾಗ ಸಂಪೂರ್ಣ ಜಖಂ ಗೊಂಡಿದೆ.

ನೇತ್ರ ದಾನ: ಮೃತ ಮಚ್ಚಮಾಡ ರಾಜು ಕುಟ್ಟಪ್ಪ ಅವರ ಕುಟುಂಬಸ್ಥರು ಅವರ ಎರಡೂ ನೇತ್ರಗಳನ್ನು ದಾನ ಮಾಡಿದರು. ಆ ಮೂಲಕ ಸಾವಿನಲ್ಲೂ ರಾಜು ಕುಟ್ಟಪ್ಪ ಸಾರ್ಥಕತೆ ಮೆರೆದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News