ಓ ಮೆಣಸೇ...

Update: 2022-02-06 19:30 GMT

ನಮ್ಮ ನಾಯಕರ ತ್ಯಾಗ ಬಲಿದಾನ ನಮ್ಮ ಶಕ್ತಿ-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
 ಅವರನ್ನೆಲ್ಲ ಜಾತ್ರೆಯಲ್ಲಿನ ಕೋಳಿ ಕುರಿಗಳ ಸ್ಥಾನದಲ್ಲಿ ನಿಲ್ಲಿಸಿ ಬಿಟ್ಟಿರಲ್ಲಾ !


ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜೊತೆ ಸೇರಿ ಹೊಸ ಪಕ್ಷ ಕಟ್ಟಲು ನನ್ನಲ್ಲಿ ಲೂಟಿ ಮಾಡಿದ ಹಣವಿಲ್ಲ- ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ಅದಕ್ಕೆ ಕದ್ದ ಸಂಪತ್ತು ಸಾಕಾಗುವುದಿಲ್ಲವೇ?


ಬಿಜೆಪಿಯ ತತ್ವ ಮತ್ತು ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಬಂದಂತಹ ವ್ಯಕ್ತಿ ನಾನು- ಎಂ.ಪಿ.ರೇಣುಕಾಚಾರ್ಯ, ಶಾಸಕ
 ನೀವು ಇಳಿದಿರುವ ಮಟ್ಟ ನೋಡಿದವರಿಗೆ ಆ ಬಗ್ಗೆ ಅನುಮಾನವೇನಿಲ್ಲ.


ಮಹಾತ್ಮಾ ಗಾಂಧಿಯ ಆದರ್ಶಗಳು ಭಾರತದ ಆಧಾರ ಸ್ತಂಭಗಳು- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಆದರೆ ಕರ್ನಾಟಕದಲ್ಲಿ ಮಾತ್ರ ಸರಕಾರಕ್ಕೆ ಎಲ್ಲ ವಿಷಯದಲ್ಲೂ ಗೋಡ್ಸೆಯೇ ಆದರ್ಶ.


50 ವರ್ಷದ ರಾಜಕೀಯದಲ್ಲಿ ನಾನು ಏನೂ ಮಾಡಿಕೊಂಡಿಲ್ಲ, ನಾನು ಬಡವ- ಸಿ.ಎಂ.ಇಬ್ರಾಹೀಂ, ಕೇಂದ್ರದ ಮಾಜಿ ಸಚಿವ
ಈ ದೇಶದಲ್ಲಿ ಯಾವ ಬಡವನಿಗೆ ನಲ್ವತ್ತು ಕೋಟಿ ಸಾಲ ಸಿಕ್ಕಿದೆ? ನಿಮ್ಮದು, ನಿಜಕ್ಕೂ ದಾಖಲೆ.


ಭ್ರಷ್ಟಾಚಾರವೆಂಬ ಗೆದ್ದಲಿನಿಂದ ದೇಶವನ್ನು ಮುಕ್ತ ಮಾಡಲು ಜನರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು- ನರೇಂದ್ರ ಮೋದಿ, ಪ್ರಧಾನಿ
 ಗೆದ್ದಲನ್ನು ಓಡಿಸಲು ಗೆದ್ದಲಿನಿಂದ ಮಾತ್ರ ಸಾಧ್ಯ ಎಂಬ ನಂಬಿಕೆಯಿಂದ ಪ್ರೇರಣೆ ಪಡೆದಿರಾ?

ವಿಧಾನಸಭೆ ಚುನಾವಣೆಯ ಬಳಿಕ ಗೋವಾದ ಗಣಿಗಾರಿಕೆ ಉದ್ಯಮವು ಎರಡು ಪಟ್ಟು ವೇಗದಲ್ಲಿ ಪುನಾರಂಭವಾಗಲಿದೆ- ಅಮಿತ್ ಶಾ, ಕೇಂದ್ರ ಸಚಿವ
ಅಲ್ಲಿ ಸೋತರೆ ಗಣಿ ದರೋಡೆಗೆ ಬೇರೆ ಜಾಗವನ್ನು ಈಗಲೇ ಹುಡುಕಿಟ್ಟುಕೊಳ್ಳಿ.

ಸಿದ್ದರಾಮಯ್ಯ ಮತ್ತು ಡಿಕೆಶಿ ಎಣ್ಣೆ-ನೀರು ಇದ್ದ ಹಾಗೆ, ಅವರು ಒಂದಾಗಲು ಸಾಧ್ಯವೇ ಇಲ್ಲ- ಗೋವಿಂದ ಕಾರಜೋಳ, ಸಚಿವ
ಎಣ್ಣೆ ಮತ್ತು ನೀರಿಗಿರುವ ಸಂಬಂಧವನ್ನು ಯಾರಾದರೂ ಕುಡುಕರ ಬಳಿ ಕೇಳಿ ಹೇಳುತ್ತಾರೆ.

ಗಾಂಧಿಯನ್ನು ಕೊಲ್ಲುವ ಬದಲು ಮುಹಮ್ಮದಲಿ ಜಿನ್ನಾರನ್ನು ಕೊಂದಿದ್ದರೆ ಅವರು ನಿಜವಾದ ಹಿಂದುತ್ವವಾದಿ ಎನಿಸಿಕೊಳ್ಳುತ್ತಿದ್ದರು- ಸಂಜಯ್ ರಾವತ್, ಶಿವಸೇನಾ ಸಂಸದ

ಒಟ್ಟಿನಲ್ಲಿ ಯಾರನ್ನಾದರೂ ಕೊಲ್ಲದೆ ಹಿಂದುತ್ವವಾದಿ ಆಗಲು ಸಾಧ್ಯವಿಲ್ಲ ಎಂದಾಯಿತು.

ಸಿ.ಎಂ.ಇಬ್ರಾಹೀಂ ಪಕ್ಷ ಬಿಟ್ಟಿರುವುದು ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ
-ಶ್ರೀರಾಮುಲು, ಸಚಿವ

ಪಕ್ಷ ಬಿಡುವುದರಿಂದ ಕೆಲವೊಮ್ಮೆ ಎಲ್ಲ ಸರಿಯಾಗುವ ಸಾಧ್ಯತೆಗಳು ಇರುತ್ತವೆ.

ಸಮಯ ಸಾಧಕರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಬಾರದು- ಎಚ್.ಆಂಜನೇಯ, ಮಾಜಿ ಸಚಿವ
ಸಮಯ ಸಾಧಕರ ಪಕ್ಷದಲ್ಲಿ ಅನ್ಯರೆಲ್ಲಿ ಫಿಟ್ ಆಗ್ತಾರೆ?

ಮೋದಿ ಸರಕಾರದಲ್ಲಿ ಯಾರಿಗೂ ಮಾಮೂಲಿ ಸಿಗುವುದಿಲ್ಲ- ಪ್ರತಾಪ ಸಿಂಹ, ಸಂಸದ
ಮಾಮೂಲಿಗಿಂತ ಸಾವಿರಪಾಲು ಹೆಚ್ಚು ಲಂಚಕ್ಕೆ ಮೈಸೂರು ಕಡೆ ಏನಂತಾರೆ?

ತ.ನಾಡು ಸ್ಥಳೀಯ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಯಾವುದೇ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ- ಅಣ್ಣಾಮಲೈ, ತ.ನಾಡು ಬಿಜೆಪಿ ಅಧ್ಯಕ್ಷ
ಯಾವುದಾದರೂ ಪಕ್ಷ ಮೈತ್ರಿಗೆ ಒಪ್ಪಿದ ದಿನ ದೇಶಕ್ಕೆ ತಿಳಿಸಿ.

ಎಸ್ಪಿಟೋಪಿಗೆ ರಾಮ ಭಕ್ತರ ರಕ್ತದಿಂದ ಬಣ್ಣ ಬಳಿಯಲಾಗಿದೆ- ಯೋಗಿ ಆದಿತ್ಯನಾಥ್, ಉ.ಪ್ರ. ಸಿಎಂ
ನೀವು ಸಂಪೂರ್ಣ ಕುಡಿದೇ ಬಿಟ್ಟಿದ್ದರಿಂದ ಹೊರಗೆಲ್ಲೂ ಕಲೆಗಳು ಕಾಣಿಸುತ್ತಿಲ್ಲ.

ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಲಕ್ಷ ರೂ. ಮೊತ್ತದಲ್ಲಿ ಬರುತ್ತಿದ್ದ ಅನುದಾನಗಳು ಬಿಜೆಪಿ ಅಧಿಕಾರದ ಅವಧಿಯಲ್ಲಿ ಕೋಟಿ ರೂ. ಮೊತ್ತದಲ್ಲಿ ಬರುತ್ತಿದೆ- ಸುನೀಲ್ ಕುಮಾರ್, ಸಚಿವ

ಬಹುಶಃ ಪಕ್ಷಕ್ಕೆ ಬರುತ್ತಿರುವ ನಿಧಿಯ ಬಗ್ಗೆ ಹೇಳುತ್ತಿರಬೇಕು.

ಚುನಾವಣೆ ಬಂದಾಗ ಕಾಂಗ್ರೆಸ್‌ಗೆ ಅಲ್ಪಸಂಖ್ಯಾತರು ವೋಟಿಗಾಗಿ ಮಾತ್ರ ಬೇಕು- ರೋಶನ್ ಬೇಗ್, ಮಾಜಿ ಸಚಿವ
ಬ್ರಹ್ಮಾಂಡ ಭ್ರಷ್ಟಾಚಾರಕ್ಕಾಗಿ ಮಾತ್ರ ಕಾಂಗ್ರೆಸನ್ನು ಬಳಸಿಕೊಂಡ ಕೆಲವು ಮುಸ್ಲಿಮ್ ನಾಯಕರೂ ಅದಕ್ಕೆ ಹೊಣೆಗಾರರು.

ಎಲ್ಲ ಧರ್ಮದವರಿಗೂ ಸಮಬಾಳು, ಸಮಪಾಲು ತತ್ವದ ಮೇಲೆ ನಿಂತಿರುವ ಪಕ್ಷ ಕಾಂಗ್ರೆಸ್ ಮಾತ್ರ- ಯು.ಟಿ.ಖಾದರ್, ಮಾಜಿ ಸಚಿವ
ಯಾವಾಗ್ಲೂ ಹಾಗೆ ನಿಂತಲ್ಲೇ ನಿಂತಿದ್ದರೆ ಸಾಕೇ? ಒಂದಷ್ಟು ಮುಂದಕ್ಕೂ ಚಲಿಸುತ್ತಿರಬೇಕು.

ಯತ್ನಾಳ್ ಮತ್ತು ರೇಣುಕಾಚಾರ್ಯ ಪದೇ ಪದೇ ಸಾರ್ವಜನಿಕವಾಗಿ ಬಹಿರಂಗ ಹೇಳಿಕೆ ನೀಡುವುದು ಒಳ್ಳೆಯ ಬೆಳವಣಿಗೆಯಲ್ಲ
-ಈಶ್ವರಪ್ಪ, ಸಚಿವ
ಹೊಲಸು ಕೆಲಸಗಳನ್ನು ಗುಟ್ಟಾಗಿ ಮಾಡುವ ಕಲೆಯನ್ನು ಅವರಿಗೆ ನೀವು ಕಲಿಸಿ ಕೊಡಿ.

ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಪಾಲಿನ ಭಸ್ಮಾಸುರ-ಎಚ್.ವಿಶ್ವನಾಥ್, ವಿ.ಪ. ಸದಸ್ಯ
ಭಸ್ಮಾಸುರ ಗೆದ್ದರೆ ನೀವು ಆತನ ಪಾದಸೇವೆಗೆ ಹಿಂಜರಿಯುವಿರಾ?

ಕ್ರಿಕೆಟ್‌ಗೆ ಕೊಡುಗೆ ನೀಡಲು ತಂಡದ ನಾಯಕನೇ ಆಗಬೇಕೆಂದಿಲ್ಲ- ವಿರಾಟ್ ಕೊಹ್ಲಿ, ಭಾರತ ಕ್ರಿಕೆಟ್ ತಂಡದ ನಿಕಟಪೂರ್ವ ನಾಯಕ
ಸಮಾಜ ಸೇವೆ ಸಲ್ಲಿಸಲು ನಮ್ಮನ್ನು ಮಂತ್ರಿಗಳಾಗಿಸಿ ಎಂದು ಅಂಗಲಾಚುವ ಪುಡಾರಿಗಳಿಗೆ ಇದರ ಒಂದಂಶ ವಿವೇಕವಾದರೂ ಇದ್ದಿದ್ದರೆ...!

ಬೊಮ್ಮಾಯಿ ಸಿಎಂ ಆಗಿದ್ದರೂ ನನ್ನ ಪಾಲಿಗೆ ಯಡಿಯೂರಪ್ಪನವರೇ ಈಗಲೂ ಮುಖ್ಯಮಂತ್ರಿ- ಕೆ.ಸಿ.ನಾರಾಯಣ ಗೌಡ, ಸಚಿವ
ಅನುಕೂಲಕ್ಕಾಗಿ ಯಾರನ್ನಾದರೂ ಅಪ್ಪ ಎನ್ನಬಲ್ಲವರು, ಯಾರನ್ನಾದರೂ ಮುಖ್ಯಮಂತ್ರಿ ಎಂದು ಎಂದು ಕರೆದರೆ ಅಚ್ಚರಿ ಇಲ್ಲ.

(ಗೋವಾದಲ್ಲಿ) ಒಂದು ವೇಳೆ ನೀವು ಆಮ್ ಆದ್ಮಿ ಪಕ್ಷಕ್ಕೆ ಮತ ಹಾಕದೇ ಇದ್ದರೆ ಪರೋಕ್ಷವಾಗಿ ಬಿಜೆಪಿಗೆ ಮತ ಹಾಕಿದಂತೆ
-ಅರವಿಂದ ಕೇಜ್ರಿವಾಲ್, ಆಪ್ ನಾಯಕ
ಪಂಜಾಬ್‌ನಲ್ಲಿ ಕಾಂಗ್ರೆಸ್‌ನವರು ನಿಮ್ಮ ವಿರುದ್ಧ ಇದೇ ಡೈಲಾಗ್ ಹೊಡೀತಿದ್ದಾರೆ.

ಅಲ್ಲಲ್ಲಿ ರಸ್ತೆಗಳನ್ನು ಅಗೆದಿರುವುದನ್ನು ನೋಡಿದಾಗ ಹೊಟ್ಟೆ ಉರಿಯುತ್ತೆ- ಭೈರತಿ ಬಸವರಾಜ್, ಸಚಿವ

ಕಾಂಟ್ರಾಕ್ಟ್ ಕೈತಪ್ಪಿದ ಕೊರಗೇ?

ಅಹಿಂದುಗಳನ್ನು ದೇವಸ್ಥಾನ ಮತ್ತು ಹಿಂದೂಗಳ ಕಾರ್ಯಕ್ರಮಕ್ಕೆ ಕರೆಯಬೇಡಿ- ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ನಾಯಕ
ಇದು ಶೂದ್ರ ಮತ್ತು ಪಂಚಮರನ್ನು ಧಾರ್ಮಿಕ ಸ್ಥಳಗಳಿಂದ ಮಾರು ದೂರ ಇಡುವ ಹಳೆಯ ಅಮಾನುಷ ಸಂಪ್ರದಾಯವನ್ನು ಮತ್ತೆ ಹೇರುವುದಕ್ಕಿರುವ ಪೀಠಿಕೆಯಲ್ಲವೇ ಭಟ್ರೇ?

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...