ಬೇಲೂರು: ಟ್ರ್ಯಾಕ್ಟರ್ ಪಲ್ಟಿಯಾಗಿ ಬಾಲಕ ಮೃತ್ಯು

Update: 2022-02-13 13:35 GMT

ಬೇಲೂರು: ಟ್ರ್ಯಾಕ್ಟರ್ ಪಲ್ಟಿಯಾಗಿ ಬಾಲಕನೋರ್ವ ಮೃತಪಟ್ಟಿರುವ ಘಟನೆ ಬೇಲೂರು ತಾಲೂಕು ಬಿಕ್ಕೋಡು ಹೋಬಳಿಯ ಚಂದನಹಳ್ಳಿ ಗ್ರಾಮದಲ್ಲಿ ನಡೆದಿದೆ.

ರೇಣುಕಾ (14 ) ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ.

ತಂದೆ ಕಾಂತರಾಜು, ಮಗಳು ಜಯಶ್ರೀಗೆ ತೀವ್ರ ಗಾಯಗಳಾಗಿದ್ದು,  ಹೆಚ್ಚಿನ ಚಿಕಿತ್ಸೆಗೆ ಹಾಸನದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಮಕ್ಕಳ ಶಾಲೆಗೆ ರಜೆ ಇದ್ದ ಕಾರಣ ತಂದೆ  ಕಾಂತರಾಜು ತನ್ನ ಜಮೀನಿನಲ್ಲಿ  ಕೆಲಸ ಮಾಡಲು ಹೊಲಕ್ಕೆ ಹೋಗುವ ವೇಳೆ ಮಗ ರೇಣುಕಾ ಹಾಗೂ ಮಗಳು ಜಯಶ್ರೀಯನ್ನು ಟ್ರ್ಯಾಕ್ಟರ್ ನಲ್ಲಿ ಕೂರಿಸಿಕೊಂಡು ಹೊಲದ ಸಮೀಪ ಹೋಗುತ್ತಿದ್ದಾಗ ರಸ್ತೆ ಪಕ್ಕದಲ್ಲಿದ್ದ ಗುಂಡಿಗೆ ಟ್ರ್ಯಾಕ್ಟರ್ ಇಳಿದ ಪರಿಣಾಮವಾಗಿ ಆಯತಪ್ಪಿ ಮುಗುಚಿ  ಬಿದ್ದು ಈ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.

 ಪಿಎಸ್ ಐ ಸುರೇಶ್  ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News