×
Ad

ನೀವು ಶಾಸಕರಾಗಲು ಎಷ್ಟು ಹಿಂದೂಗಳ ಬಲಿಯಾಗಬೇಕು: ಸಚಿವ ಈಶ್ವರಪ್ಪಗೆ ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್ ಪ್ರಶ್ನೆ

Update: 2022-02-22 20:11 IST

ಶಿವಮೊಗ್ಗ , ಫೆ.22:ಸೋಮವಾರ ನಡೆದ ಘಟನೆಗೆ ಸಚಿವ ಈಶ್ವರಪ್ಪರ ಹೊಣೆ ಹೊರಬೇಕಿದೆ. ಘಟನೆಯಿಂದ ಆದಂತಹ ನಷ್ಟವನ್ನು ಅವರೇ ಭರಿಸಬೇಕು ಎಂದು ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್ ಒತ್ತಾಯಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯ ಶಾಂತಿ ಸುವ್ಯವಸ್ಥೆ ಜೊತೆ ಆಟವಾಡುತ್ತಿರುವ ಈಶ್ವರಪ್ಪನವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು. ಆದಂತಹ ನಷ್ಟವನ್ನು ಅವರೇ ಭರಿಸಬೇಕು ಎಂದು ಒತ್ತಾಯಿಸಿದರು.

ಜವಾಬ್ದಾರಿಯುತ ಸ್ಥಾನದಲ್ಲಿ ರುವ ಸಚಿವ ಈಶ್ವರಪ್ಪನವರ ನಡೆ ನಿಜಕ್ಕೂ ಖಂಡನೀಯ. ಅವರು ನೀಡುತ್ತಿರುವ ಹೇಳಿಕೆಗಳು ಕೂಡ ಪ್ರಚೋದನಕಾರಿಯಾಗಿವೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ವರು ಈ ರೀತಿ ಹೇಳಿಕೆಗಳನ್ನು ನೀಡಬಾರದು ಎಂದರು.

ನೀವು ಶಾಸಕರಾಗಲು ಎಷ್ಟು ಹಿಂದೂಗಳ ಬಲಿಯಾಗಬೇಕು? ಹಿಂದೂಗಳ ರಕ್ಷಣೆಗೆ ನಮಗೆ ಮತ ಹಾಕಬೇಕೆಂದು ಮತ ಹಾಕಿಸಿ ಕೊಂಡಿದ್ದಾರೆ. ಈಗ ಅವರ ಹಿಂಬಾಲಕನ ಹತ್ಯೆ ಆಗಿದೆ. ಅವರ ಮನೆಯವರು ಲೈಫ್ ಥ್ರೆಟ್ ಇತ್ತು ಎಂದು ಹೇಳಿದ್ದಾರೆ. ಆದರೆ ಜೊತೆಗೆ ಇರುವವರಿಗೆ ರಕ್ಷಣೆ ಕೊಟ್ಟಿಲ್ಲ ಅಂದರೆ ನಾಗರೀಕರು ಹೇಗೆ ಸುರಕ್ಷಿತವಾಗಿರಲಿzರೆ ಎಂದು ಪ್ರಶ್ನಿಸಿದರು.

ಇಡೀ ಕೃತ್ಯವನ್ನ ಹಾಲಿ ನ್ಯಾಯಾಧೀಶರ ಮೂಲಕ ತನಿಖೆ ಮಾಡಿಸಬೇಕೆದೆ. ಅವರೇ ಎನ್‌ಐಎ ತನಿಖೆಗೆ ಆಗ್ರಹಿಸಿzರೆ. ಅದು ಬಾಯಿ ಮಾತಿಗೆ ಸೀಮಿತವಾಗಬಾ ರದು. ಅವರಿಂದಲೂ ಕಾನೂನು ಉಲ್ಲಂಘ ನೆಯಾಗಿದೆ. ಶಿವಮೊಗ್ಗ ದಲ್ಲಿ ನಡೆದ ಘಟನೆ ಬಗ್ಗೆ ಸಂಪೂರ್ಣ ತನಿಖೆಯಾ ಗಬೇಕು. ತಪ್ಪಿತಸ್ಥರ ಬಂಧನವಾಗ ಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ದೀಪಕ್‌ಸಿಂಗ್, ಶ್ಯಾಮ ಸುಂದರ್,ರಘು ಉಪಸ್ಥಿತರಿದ್ದರು.

ಮೆರವಣಿಗೆಯಲ್ಲಿ ಕಲ್ಲು ತೂರಾಟ ನಡೆಸಿದವರು ಯಾರೂ ನಮ್ಮ ಜಿಯವರು ಅಲ್ಲ ಎಂದು ಸಚಿವ ಈಶ್ವರಪ್ಪರವರು  ಹೇಳಿಕೆ ನೀಡಿzರೆ. ಆರಂಭದಲ್ಲಿಯೇ ಹೊರಗಿನವರು ಬಂದಿದ್ದರಿಂದ ಗಲಭೆ ಆಗಿದೆ ಎಂದು ಸಚಿವರೇ ಹೇಳುತ್ತಿzರೆ. ಸಚಿವರಿಗೆ ಮೊದಲೇ ಮಾಹಿತಿ ಇದ್ದರೆ ಅದನ್ನು ಏಕೆ ಪೊಲೀಸ್ ಇಲಾಖೆಗೆ ತಿಳಿಸಲಿಲ್ಲ .

-ಕೆ.ಬಿ ಪ್ರಸನ್ನ ಕುಮಾರ್,ಕಾಂಗ್ರೆಸ್ ವಕ್ತಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News