ಜಾಮೀನು ದೊರೆತರೂ ನಟ ಚೇತನ್ ಗೆ ಸೋಮವಾರದವರೆಗೆ ಬಿಡುಗಡೆಯಿಲ್ಲ?

Update: 2022-02-25 15:25 GMT
ನಟ ಚೇತನ್

ಬೆಂಗಳೂರು: ನ್ಯಾಯಾಧೀಶರ ನಿಲುವಿನ ಕುರಿತು ಟೀಕೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಆಗಿದೆ. ಆದರೆ ಜಾಮೀನು ದೊರೆತರೂ ಶ್ಯೂರಿಟಿ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ನಟ ಚೇತನ್​ ಇನ್ನೂ‌ ಮೂರು‌ ದಿನಗಳ‌ ಕಾಲ ಪರಪ್ಪನ‌ ಅಗ್ರಹಾರ ಜೈಲಿನಲ್ಲೇ‌ ಇರಬೇಕಾಗುತ್ತದೆ‌.‌

ನಾಳೆ ನಾಲ್ಕನೇ‌ ಶನಿವಾರ ಆಗಿರುವುದರಿಂದ ಶ್ಯೂರಿಟಿ ಒದಗಿಸುವುದು ಸಾಧ್ಯವಾಗದಿದ್ದಲ್ಲಿ ಸೋಮವಾರ ತನಕವೂ ಚೇತನ್​ಗೆ ಬಿಡುಗಡೆ ಸಾಧ್ಯವಿಲ್ಲ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News