ಜನತೆಯ ನೀರಿನ ಹಕ್ಕಿಗಾಗಿ ಕಾಂಗ್ರೆಸ್ ಪಾದಯಾತ್ರೆ: ರಣದೀಪ್ ಸಿಂಗ್ ಸುರ್ಜೇವಾಲ

Update: 2022-02-27 06:49 GMT

ರಾಮನಗರ: 'ಇವತ್ತು ಉದ್ದ ಭಾಷಣ ಮಾಡುವ ದಿನವಲ್ಲ, ಇವತ್ತು ಇತಿಹಾಸ ಬರೆಯುವ ದಿನ. ಕಾವೇರಿ ನೀರು ಮಾತ್ರವಲ್ಲ, ಈ ಭೂಮಿ ನೀರು ಉಳಿಯಬೇಕು ಇದಕ್ಕಾಗಿ ಕಾಂಗ್ರೆಸ್ ಪಾದಯಾತ್ರೆ ಮಾಡುತ್ತಿದೆ ಜನರ ಹಕ್ಕಿಗೆ ಕಾಂಗ್ರೆಸ್ ಹೋರಾಟ ಮಾಡುತ್ತಿದೆ' ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ. 

ರಾಮನಗರದಲ್ಲಿ ಎರಡನೇ ಹಂತದ ಮೇಕೆದಾಟು ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು. 

ಈ ಹೋರಾಟ ತಡೆಯಲು ಬಿಜೆಪಿ ಸರ್ಕಾರ ಪ್ರಯತ್ನ ಮಾಡುತ್ತಿದೆ ಆ ಸರ್ಕಾರಕ್ಕೆ ನಮ್ಮ ಧ್ವನಿ ಕೇಳಿಸಬೇಕು ಎಲ್ಲ ಜನರು ಒಗ್ಗಟ್ಟಿನ ಮೂಲಕ ಹೋರಾಟ ‌ಮಾಡೋಣ. ನಮ್ಮ ನೀರು ನಮಗೆ ಸಿಕ್ಕೇ ಸಿಗುತ್ತೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಸುರ್ಜೇವಾಲ ವಾಗ್ದಾಳಿ ನಡೆಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News