ಮಡಿಕೇರಿ: ಹುತಾತ್ಮ ಯೋಧ ಅಲ್ತಾಫ್ ಮನೆಗೆ ಸಂಸದ ಪ್ರತಾಪ್ ಸಿಂಹ ಭೇಟಿ

Update: 2022-03-09 13:49 GMT

ಸಿದ್ದಾಪುರ, ಮಾ.9: ಫೆಬ್ರವರಿ 23 ರಂದು ಕಾಶ್ಮೀರದಲ್ಲಿ ಹಿಮಗಡ್ಡೆಯಲ್ಲಿ ಸಿಲುಕಿ ಮೃತಪಟ್ಟಿರುವ ಕೊಡಗಿನ ಯೋಧ ಅಲ್ತಾಫ್ ಅಹಮದ್ ಅವರ ಮೆನೆಗೆ ಕೊಡಗು -ಮೈಸೂರು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿದ್ದಾರೆ.

ವಿರಾಜಪೇಟೆ ಸಮೀಪದ ಎಡಪಲದಲ್ಲಿರುವ ಯೋಧನ ಮೆನೆಗೆ 15 ದಿನಗಳ ಬಳಿಕ ಭೇಟಿ ನೀಡುರುವ ಅವರು, ಯೋಧನ ಪತ್ನಿ ಹಾಗೂ ಮಕ್ಕಳಿಗೆ ಸಾಂತ್ವನ ಹೇಳಿದರು. 

ಈ ವೇಳೆ 50 ಸಾವಿರ ರೂ. ಧನ ಸಹಾಯ ಮಾಡಿದ ಸಂಸದರು, ಬಾಡಿಗೆ ಮನೆಯಲ್ಲಿರುವ ಅಲ್ತಾಫ್ ಕುಟುಂಬಕ್ಕೆ ಸರ್ಕಾರಿ  ಜಮೀನು ಕೊಡಿಸುವ ಭರವಸೆ ನೀಡಿದರು. ತಕ್ಷಣವೇ ಈ ಬಗ್ಗೆ ಕ್ರಮ ವಹಿಸಲು ಕೊಡಗು ಜಿಲ್ಲಾಧಿಕಾರಿ ಅವರಿಗೆ ಸಂಸದರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News