ಮಡಿಕೇರಿ: ಹುತಾತ್ಮ ಯೋಧನ ಕುಟುಂಬಕ್ಕೆ ಮಾಜಿ ಸಚಿವ ಯು.ಟಿ.ಖಾದರ್ ನೆರವು

Update: 2022-03-09 15:26 GMT

ಮಡಿಕೇರಿ ಮಾ.9 : ಕಾಶ್ಮೀರದಲ್ಲಿ ಹಿಮಪಾತದಿಂದ ಮೃತಪಟ್ಟ ವಿರಾಜಪೇಟೆಯ ಯೋಧ ಅಲ್ತಾಫ್ ಅಹ್ಮದ್ ಅವರ ಕುಟುಂಬಕ್ಕೆ ಮಾಜಿ ಸಚಿವ ಯು.ಟಿ.ಖಾದರ್ ಸಾಂತ್ವನ ಹೇಳಿ ಧನ ಸಹಾಯ ಮಾಡಿದರು.

ಯೋಧ ಅಲ್ತಾಫ್ ಅವರ ಪತ್ನಿ ಹಾಗೂ ಮಕ್ಕಳು ವಾಸವಿರುವ ಎಡಪಾಲದ ನಿವಾಸಕ್ಕೆ ಭೇಟಿ ನೀಡಿದ ಅವರು ಇಬ್ಬರು ಮಕ್ಕಳಿಗೆ ತಲಾ 50 ಸಾವಿರ ರೂ.ಗಳ ಚೆಕ್ ವಿತರಿಸಿದರು.

ನಂತರ ಚೆನ್ನಯ್ಯನಕೋಟೆ ನಿವಾಸದಲ್ಲಿರುವ ಯೋಧ ಅಲ್ತಾಫ್ ಅವರ ತಾಯಿಯನ್ನು ಮಾಜಿ ಸಚಿವರ ಅನುಪಸ್ಥಿತಿಯಲ್ಲಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಮತ್ತಿತರರು ಭೇಟಿ ಮಾಡಿ ಸಾಂತ್ವನ ಹೇಳಿದರು. ಖಾದರ್ ಅವರು ನೀಡಿದ್ದ ರೂ.50 ಸಾವಿರದ ಚೆಕ್ ನ್ನು ತಾಯಿಗೆ ಹಸ್ತಾಂತರಿಸಿದರು. 

ಚೆನ್ನಯ್ಯನಕೋಟೆ ಕಾಂಗ್ರೆಸ್ ವಲಯಾಧ್ಯಕ್ಷ ಸುರೇಶ್, ನಗರ ಕಾಂಗ್ರೆಸ್ ಉಪಾಧ್ಯಕ್ಷ ಹಮೀದ್, ಅಸಂಘಟಿತ ಕಾರ್ಮಿಕರ ಜಿಲ್ಲಾ ಉಪಾಧ್ಯಕ್ಷ ಸತೀಶ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಾನ್ಸನ್, ಚೆನ್ನಯ್ಯನಕೋಟೆ ಪಂಚಾಯಿತಿ ಸದಸ್ಯರಾದ ಜಾನಕಿ, ಶಬೀರ್, ಪ್ಯಾಟ್ರಿಕ್ ಮತ್ತಿತರರು ಈ ಸಂದರ್ಭ ಹಾಜರಿದ್ದರು. 

ಇದನ್ನೂ ಓದಿ: ಮಡಿಕೇರಿ: ಹುತಾತ್ಮ ಯೋಧ ಅಲ್ತಾಫ್ ಮನೆಗೆ ಸಂಸದ ಪ್ರತಾಪ್ ಸಿಂಹ ಭೇಟಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News