ಜೆಡಿಎಸ್ ಸೇರ್ಪಡೆ ವಿಚಾರ: ನಾಳೆ ನನ್ನ ತೀರ್ಮಾನ ಹೇಳುತ್ತೇನೆ ಎಂದ ಸಿ.ಎಂ.ಇಬ್ರಾಹಿಂ

Update: 2022-03-11 16:49 GMT

ಕೋಲಾರ: ನನಗೆ ಪಕ್ಷಕ್ಕಿಂತ ಮಾಜಿ ಪ್ರಧಾನಿ ದೇವೇಗೌಡರು ಮುಖ್ಯ. ಈಗಾಗಲೇ ಸಮುದಾಯದ ಮುಖಂಡರ ಜೊತೆ  ಚರ್ಚೆ ನಡೆಸಿದ್ದು, ನಾಳೆ ಯಾವ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ ಎಂದು ಅಧಿಕೃತವಾಗಿ ಘೋಷಣೆ ಮಾಡುತ್ತೇನೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ. 

ಜೆಡಿಎಸ್ ಸೇರುವ ವಿಚಾರದ ಕುರಿತು ಶುಕ್ರವಾರ ಸದ್ದಿಗಾರರ ಜೊತೆ ಮಾತನಾಡಿದ ಅವರು, ‘ನನ್ನ ರಾಜಕೀಯ ನಿರ್ಧಾರದಂತೆ ಮುಂದೆ ರಾಜ್ಯದಲ್ಲಿ ಸರ್ಕಾರ ರಚನೆಯಾಗಲಿದೆ. ನಾನು ಇರುವ ಪಕ್ಷ ಎಂದೆಂದಿಗೂ ನಂ.1 ಸ್ಥಾನದಲ್ಲಿರುತ್ತದೆ' ಎಂದು ಹೇಳಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News