ಅಪ್ಪು ಅಭಿಮಾನಕ್ಕಾಗಿ ನವೀನ್ ಸಜ್ಜು ಗಾನ ನಮನ

Update: 2022-03-21 17:46 GMT
ಪುನೀತ್ ರಾಜ್ ಕುಮಾರ್ 

ಬೆಂಗಳೂರು: ಅಭಿಮಾನಿಗಳು  ಪುನೀತ್ ರಾಜ್ ಕುಮಾರ್ ಅವರನ್ನು ದೈಹಿಕವಾಗಿ ಕಳೆದುಕೊಂಡಿದ್ದರೂ ಕನ್ನಡಿಗರ ಮನಸ್ಸಿನಲ್ಲಂತೂ ಅಪ್ಪು ಅಜರಾಮರ. ದೊಡ್ಮನೆ ದೊರೆ ಪುನೀತ್ ರಾಜಕುಮಾರ್ ಮೇಲಿನ ಪ್ರೀತಿ ಮತ್ತು ಅಭಿಮಾನಕ್ಕಾಗಿ ಕನ್ನಡದ ಖ್ಯಾತ ಗಾಯಕ ನವೀನ್ ಸಜ್ಜು ಹಾಡೊಂದನ್ನು ಹಾಡಿದ್ದಾರೆ.

ಸಿ.ಎಸ್ ಅಶ್ವಥ್ ರವರೇ ಧರೆಗಿಳಿದು ಬಂದು ನಮ್ಮ 'ಪುನೀತ' ರಾಜಕುಮಾರನಿಗಾಗಿ ಹಾಡಿದಂತಿದೆ ಈ ಹಾಡು. ಅಭಿಮಾನಿಗಳ ಎದೆಗೆ ಅಪ್ಪುವನ್ನು ಕಳೆದುಕೊಂಡ ನೋವು ಮತ್ತಷ್ಟು ನಾಟುವಂತೆ ಮಾಡಿದೆ ಈ ಹಾಡು.

'ದೊಡ್ಮನೆ ದೊರೆ ಅಪ್ಪು ಅಜರಾಮರ'  ಎಂಬ ಈ ಹಾಡನ್ನು  ಚೇತನ್ ಕುಮಾರ್ ಬರೆದಿದ್ದಾರೆ. ನವೀನ್ ಸಜ್ಜು ಸಂಗೀತ ಸಂಯೋಜನೆ-ಗಾಯನ-ನಿರ್ದೇಶನ ನಿರ್ವಹಿಸಿದ್ದಾರಲ್ಲದೆ  ಈ ಹಾದಿನಲ್ಲಿ ಅಭಿನಯವನ್ನು ಕೂಡ ಮಾಡಿದ್ದಾರೆ.

ಮಾರ್ಚ್  20ನೇ ತಾರೀಕಿನಂದು ಬಿಡುಗಡೆಯಾಗಿರುವ ದೊಡ್ಮನೆ ದೊರೆ ಹಾಡನ್ನು ಕೇಳಲು ಈ ಲಿಂಕ್ ಕ್ಲಿಕ್ ಮಾಡಿ https://youtu.be/r3vVT0mlrd8 .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News