ಮೈಸೂರು ವಿವಿ ಘಟಿಕೋತ್ಸವ: ಎರಡು ಚಿನ್ನದ ಪದಕ ಪಡೆದ ಆಫ್ಘಾನಿಸ್ತಾನದ ವಿದ್ಯಾರ್ಥಿ ಸೈಯ್ಯದ್ ಖುದ್ರತ್ ಹಾಶ್ಮಿ

Update: 2022-03-22 17:45 GMT

ಮೈಸೂರು,ಮಾ.22: ಮೈಸೂರು ವಿಶ್ವವಿದ್ಯಾನಿಲಯದ 102ನೇ ಘಟಿಕೋತ್ಸವದಲ್ಲಿ ಆಫ್ಘಾನಿಸ್ತಾನ ವಿದ್ಯಾರ್ಥಿಯಾದ ಸೈಯ್ಯದ್ ಖುದ್ರತ್ ಹಾಶ್ಮಿ 2 ಚಿನ್ನದ ಪದಕ ಹಾಗೂ 3 ನಗದು ಬಹುಮಾನ ಪಡೆದು ಸಾಧನೆ ಮಾಡಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದ 102ನೇ ಘಟಿಕೋತ್ಸವದಲ್ಲಿ ಆಫ್ಘಾನಿಸ್ತಾನದ ವಿದ್ಯಾರ್ಥಿಯಾದ ಸೈಯ್ಯದ್ ಖುದ್ರತ್ ಹಾಶ್ಮಿ ಅವರು ಅಂತಾರಾಷ್ಟ್ರೀಯ ಕಾನೂನು ವಿಷಯದಲ್ಲಿ 2 ಚಿನ್ನದ ಪದಕ ಹಾಗೂ ಮೂರು ನಗದು ಬಹುಮಾನ ಪಡೆದಿದ್ದಾರೆ.

ತಮಗೆ ಚಿನ್ನದ ಪದಕ ದೊರೆತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದು, ವಿದ್ಯಾಭ್ಯಾಸಕ್ಕೆ ಸಹಕಾರ ನೀಡಿದ ಭಾರತ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.ಕೋವಿಡ್ ಸಂದರ್ಭದಲ್ಲಿ ಬಹಳ ತೊಂದರೆಯಾಗಿತ್ತು, ಲೈಬ್ರರಿ ಒಪನ್ ಇರಲಿಲ್ಲ, ಓದಲು ಆಗುತ್ತಿರಲಿಲ್ಲ. ಈ ಪದಕವನ್ನು ಭಾರತದ ಜನರಿಗೆ ಸಲ್ಲಿಸುತ್ತೇನೆ. ಇಲ್ಲಿನ ಜನರು ಬುದ್ದಿವಂತರು, ಮೈಸೂರಿನ ಜನರ ಸಂಸ್ಕೃತಿ ಇಷ್ಟ ಎಂದು ಸಂತಸಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News