VIDEO- ಸುಪ್ರೀಂ ಆದೇಶದ ವಿರುದ್ಧ ಕೇರಳದಲ್ಲಿ ನಿಮ್ಮ ಪಾರ್ಟಿಯವರೇ ಬೀದಿಗಿಳಿದು ಪ್ರತಿಭಟಿಸಿದ್ದರು: ಕೃಷ್ಣಭೈರೇಗೌಡ

Update: 2022-03-23 13:01 GMT

ಬೆಂಗಳೂರು:  'ಕೇರಳದಲ್ಲಿ  ಧಾರ್ಮಿಕ ಸಂಸ್ಥೆ ಬಗ್ಗೆ ಸುಪ್ರೀಂ ಕೋರ್ಟ್ ಇದೇ ರೀತಿಯಲ್ಲಿ ಒಂದು ಆದೇಶ ಕೊಟ್ಟಾಗ ನಿಮ್ಮ ಪಕ್ಷದವರು ಸುಪ್ರೀಂ ಆದೇಶದ ವಿರುದ್ಧ ವರ್ಷಗಟ್ಟಲೆ ಚಳುವಳಿ ಮಾಡಿದ್ದನ್ನು ಸ್ವಲ್ಪ ನೀವು ಜ್ಞಾಪಿಸಿಕೊಳ್ಳಿ' ಎಂದು ಸಚಿವ ಆರ್. ಅಶೋಕ್ ಗೆ ಮಾಜಿ ಸಚಿವ ಕೃಷ್ಣಭೈರೇಗೌಡ ತಿರುಗೇಟು ನೀಡಿದರು. 

ಬುಧವಾರ ವಿಧಾನಸಭೆಯಲ್ಲಿ ಹಿಜಾಬ್ ಪ್ರಕರಣದ ಕುರಿತು ಪ್ರಸ್ತಾಪಿಸುವ ವೇಳೆ  ಕೋರ್ಟ್ ಆದೇಶ ಉಲ್ಲಂಘಿಸಿ ಬಂದ್ ನಡೆಸಿರು ಬಗ್ಗೆ ಆರ್. ಅಶೋಕ್ ತಿಳಿಸಿದಾಗ ಈ ಕುರಿತು ಮಧ್ಯ ಪ್ರವೇಶಿಸಿದ ಕೃಷ್ಣಭೈರೇಗೌಡ, ''ಅಂದು ಕೇರಳದಲ್ಲಿ ನಿಮ್ಮ ಪಾರ್ಟಿಯವರೇ ಬೀದಿಗಿಳಿದು ಪ್ರತಿಭಟಿಸಿದ್ದರು. ನಾನು ಯಾವ ಧರ್ಮ, ಪಕ್ಷ ಅಂತ ಹೇಳ್ತಾ ಇಲ್ಲ. ಸಂಘರ್ಷಕ್ಕೆ ಅವಕಾಶ ಮಾಡಿಕೊಡುವುದಲ್ಲ'' ನನ್ನ ಉದ್ದೇಶ ಎಂದರು. 

''ನಮಗೆ ಅನ್ವಯಿಸುವಾಗ ಒಂದು ಥರ ಮಾತಾಡೋದು, ಇತರರಿಗೆ ಅನ್ವಯಿಸುವಾಗ ಇನ್ನೊಂದು ಥರ ಮಾತಾಡೋದು. ನಾವೆಲ್ಲಾ ಗಾಜಿನ ಮನೆಯಲ್ಲಿ ಇರೋದು. ಕರ್ನಾಟಕದಲ್ಲಿ ನಡೆದಿರುವ ಬಗ್ಗೆ ಹೇಳ್ತಾ ಇದ್ದೇನೆ. ಸಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿ ಅಂದು ಕೇರಳದಲ್ಲಿ ನೀವು ಏನೇನೆಲ್ಲ ಮಾಡಿದ್ದೀರಿ ಎಂಬುದರ ಬಗ್ಗೆ ಒಮ್ಮೆ ನೆನಪಿಸಿಕೊಳ್ಳಿ. ಅಲ್ಲಿ ಒಂದು ನ್ಯಾಯ, ಇಲ್ಲೊಂದು ನ್ಯಾಯ  ಇದು ಸರಿಯಲ್ಲ '' ಎಂದರು. 

''ಜನರಿಗೆ ಉದ್ಯೋಗ ಕೊಟ್ಟು ಅದರಲ್ಲಿ ರಾಜಕೀಯ ಮಾಡುವ ಬದಲು ಒಬ್ಬರ ಜೀವನಕ್ಕೆ ಬೆಂಕಿ ಹಾಕಿ ದುರುಪಯೋಗ ಮಾಡೋದು ಸರಿಯಲ್ಲ'' ಎಂದರು. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News