ರಾಜಕೀಯ ಪ್ರಭಾವ ಬಳಸಿ ಪುತ್ರಿಗೆ ನಕಲಿ ಜಾತಿ ಸರ್ಟಿಫಿಕೇಟ್ ಕೊಡಿಸಿದ ರೇಣುಕಾಚಾರ್ಯ: ಕಾಂಗ್ರೆಸ್ ಆರೋಪ
Update: 2022-03-23 14:16 GMT
ಬೆಂಗಳೂರು: ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ರೇಣುಕಾಚಾರ್ಯ ತನ್ನ ಪುತ್ರಿಗೆ ನಕಲಿ ಜಾತಿ ಸರ್ಟಿಫಿಕೇಟ್ ಕೊಡಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ರೇಣುಕಾಚಾರ್ಯ ತಮ್ಮ ರಾಜಕೀಯ ಪ್ರಭಾವ ಬಳಸಿ ಪುತ್ರಿಗೆ ಬೇಡಜಂಗಮ ಜಾತಿಯ ನಕಲಿ ಸರ್ಟಿಫಿಕೇಟ್ ಕೊಡಿಸಿರುವ ಪ್ರಕರಣದಿಂದ ಬಿಜೆಪಿಗರ ಅಕ್ರಮ, ನೈತಿಕ ದಿವಾಳಿತನ ಬಯಲಾಗಿದೆ ಎಂದು ಹೇಳಿದೆ.
ಅಶಕ್ತ ಸಮುದಾಯಗಳಿಗೆ ಅನ್ಯಾಯವೆಸಗುತ್ತಿರುವ ರೇಣುಕಾಚಾರ್ಯರನ್ನು ರಾಜಕೀಯ ಕಾರ್ಯದರ್ಶಿ ಹುದ್ದೆಯಲ್ಲಿ ಇನ್ನೂ ಏಕೆ ಇಟ್ಟುಕೊಂಡಿದ್ದೀರಿ? ಎಂದು ಬಸವಾಜ ಬೊಮ್ಮಾಯಿ ಅವರಿಗೆ ಕಾಂಗ್ರೆಸ್ ಪ್ರಶ್ನಿಸಿದೆ.