ಆ್ಯಕ್ಷನ್‌ಗೆ ರಿಯಾಕ್ಷನ್ ಎಂದಾಗಲೇ ಕ್ರೌರ್ಯದ ಮುಖ ಅನಾವರಣವಾಯ್ತು: ಸಿಎಂ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

Update: 2022-03-25 12:53 GMT

ಬೆಂಗಳೂರು: 'ಬೊಮ್ಮಾಯಿಯವರು ತಮ್ಮ ಅಭಿವೃದ್ಧಿ ಕೆಲಸಗಳನ್ನು ತೋರಿಸಿ ಮತ ಕೇಳಲು ಮುಖವಿಲ್ಲದೆ ಚುನಾವಣೆಗೆ ಮತೀಯ ವಿಷಯಗಳನ್ನು ಮುಂದಿಡಲು ನೆಲ ಹದಗೊಳಿಸುತ್ತಿದ್ದಾರೆ. ಆ್ಯಕ್ಷನ್‌ಗೆ ರಿಯಾಕ್ಷನ್ ಎಂದಾಗಲೇ ಅವರೊಳಗಿನ ಕ್ರೌರ್ಯದ ಮುಖ ಅನಾವರಣವಾಯ್ತು. ಅಲ್ಲಿಂದ ಇಲ್ಲಿಯವರೆಗೂ ರಾಜ್ಯದಲ್ಲಿ ಅಭಿವೃದ್ಧಿ ಆಧಾರಿತ ಚರ್ಚೆಯೇ ನಡೆದಿಲ್ಲ' ಎಂದು ಕಾಂಗ್ರೆಸ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದೆ.

ಈ ಕುರಿತು ಶುಕ್ರವಾರ ಟ್ವೀಟ್ ಮಾಡಿರುವ ಕಾಂಗ್ರೆಸ್,  'ಕ್ರಿಯೆಗೆ ಪ್ರತಿಕ್ರಿಯೆ ಎಂದು ಗೂಂಡಾಗಿರಿಗೆ ಒಪ್ಪಿಗೆ, ಮತಾಂತರ ನಿಷೇಧ ಮಸೂದೆ , ತ್ರಿವರ್ಣಧ್ವಜಕ್ಕೆ ಅವಮಾನ , ಹಿಜಾಬ್ v/s ಕೇಸರಿ ಶಾಲು , ಹರ್ಷ ಕೊಲೆ ಪ್ರಕರಣದ ವೈಭವೀಕರಣ, ಕಾಶ್ಮೀರ್ ಫೈಲ್ಸ್ ಪ್ರಚಾರ , ವ್ಯಾಪಾರಕ್ಕೂ ಕೋಮುದ್ವೇಷದ ಲೇಪ. ಬೊಮ್ಮಾಯಿ ಅವರೇ, ಇದೇ ಅಲ್ಲವೇ ನಿಮ್ಮ ಸಾಧನೆಯ ಪಟ್ಟಿ, ಇದಲ್ಲದೆ ಬೇರೇನಿದೆ?' ಎಂದು ಪ್ರಶ್ನಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News