ಮನುಷ್ಯನಲ್ಲಿ ಒಳ್ಳೆಯತನ ಇದ್ದರೆ ಕುಂಕುಮ, ಹಿಜಾಬ್, ಹಲಾಲ್ ಯಾವುದೂ ಸಮಸ್ಯೆಯಲ್ಲ: ಮಾಜಿ ಸಚಿವ ಎಚ್.ಸಿ ಮಹದೇವಪ್ಪ

Update: 2022-03-30 11:16 GMT

ಬೆಂಗಳೂರು: ಮನುಷ್ಯನಲ್ಲಿ ಒಳ್ಳೆಯತನ ಇದ್ದರೆ ಕುಂಕುಮವೂ ಸಮಸ್ಯೆಯಲ್ಲ, ಹಿಜಾಬ್, ಹಲಾಲ್ ಯಾವುದೂ ಕೂಡಾ ಸಮಸ್ಯೆಯಲ್ಲ ಎಂದು ಮಾಜಿ ಸಚಿವ ಎಚ್. ಸಿ ಮಹದೇವಪ್ಪ ಹೇಳಿದ್ದಾರೆ.

ಮಹದೇವಪ್ಪ ಅವರ ಟ್ವೀಟ್ ಇಂತಿದೆ...

'ಇಲ್ಲಿ ಗುಡಿಯೂ ಸಮಸ್ಯೆಯಲ್ಲ, ಚರ್ಚು, ಮಸೀದಿ ಯಾವುದೂ ಸಮಸ್ಯೆಯಲ್ಲ. ಮೌಢ್ಯ ರಹಿತವಾದ ವೈಜ್ಞಾನಿಕ ಆಚರಣೆಗಳನ್ನು ಎಲ್ಲ ಧರ್ಮದವರೂ ಗೌರವಿಸಬೇಕು. ಇಷ್ಟವಿದ್ದರೆ ಭಾಗಿಯಾಗಬೇಕು'.

'ಇನ್ನು ಮನುಷ್ಯನ ಹಸಿವಿನ ಮುಂದೆ ಯಾವ ಧರ್ಮವೂ ನಿಲ್ಲಲಾರದು ಇದೇ ಸಂವಿಧಾ‌ನ ನಮಗೆ ಹೇಳುವಂತಹ ತಿಳುವಳಿಕೆ. ಆದರೆ ಈ ದಿನ ದೇಶದ ಆಮ್ಲಜನಕವಾಗಿರುವ ಪ್ರಜಾಪ್ರಭುತ್ವದ ಉಸಿರಾಡಬೇಕಾದ ಮನುಷ್ಯ ವಿರೋಧಿಗಳು ದ್ವೇಷದ ವಿಷವನ್ನೇ ಉಸಿರಾಡುತ್ತಿದ್ದು ಅವರೇನು ಮಾನಸಿಕವಾಗಿ ಉಳಿಯುವಂತಹ ಲಕ್ಷಣ ಕಾಣುತ್ತಿಲ್ಲ. ಇಂತವರಿಂದ ಬಾಬಾ ಸಾಹೇಬರ ಪ್ರಯತ್ನಗಳಿಗೆ ಸೋಲಾಗಬಾರದು' ಎಂದು ಮಾಜಿ ಸಚಿವ ಎಚ್. ಸಿ ಮಹದೇವಪ್ಪ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News