ಪೊಲೀಸ್ ಆಯುಕ್ತರು ಸುಳ್ಳು ಹೇಳುವ ಪ್ರಶ್ನೆಯೇ ಇಲ್ಲ: ಸಚಿವ ಜೆ.ಸಿ.ಮಾಧುಸ್ವಾಮಿ
Update: 2022-04-10 16:25 GMT
ಬೆಳಗಾವಿ, ಎ.10: ಜೆಜೆ ನಗರದಲ್ಲಿ ಚಂದ್ರು ಕೊಲೆ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸುಳ್ಳು ಹೇಳುವ ಪ್ರಶ್ನೆಯೇ ಇಲ್ಲ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸುಳ್ಳು ಹೇಳುವ ಪ್ರಶ್ನೆಯೇ ಇಲ್ಲ. ಈ ವಿವಾದದಲ್ಲಿ ಅಧಿಕಾರಿಗಳೇನೂ ತಿರುಗಿ ಬಿದ್ದಿಲ್ಲ. ಯಾರೋ ಕೊಟ್ಟ ಮಾಹಿತಿಯನ್ನು ಗೃಹ ಸಚಿವರು ತಕ್ಷಣ ಹೇಳಿಬಿಟ್ಟಿದ್ದಾರಷ್ಟೇ ಎಂದರು.
ಚಂದ್ರು ಕೊಲೆ ಪ್ರಕರಣವೂ ಸಿಐಡಿ ತನಿಖೆಯಾಗಿ ಸತ್ಯ ಹೊರಬರಲಿ ಎಂದ ಅವರು, ಈಗ ನಡೆಯುತ್ತಿರುವ ಅಭಿಯಾನಗಳಿಗೆ, ವಿವಾದಗಳಿಗೆ ಸರಕಾರ ಜವಾಬ್ದಾರಿಯಲ್ಲ ಎಂದು ತಿಳಿಸಿದರು.