ಕೊಪ್ಪಳ: 'ನಾಲ್ಕು ವರ್ಷಗಳಿಂದ ನೀವು ಏನೂ ಮಾಡಿಲ್ಲ' ಎಂದು ಬಿಜೆಪಿ ಶಾಸಕನಿಗೆ ಗ್ರಾಮಸ್ಥರಿಂದ ತರಾಟೆ

Update: 2022-04-11 09:53 GMT
 ಬಿಜೆಪಿ ಶಾಸಕನಿಗೆ ಗ್ರಾಮಸ್ಥರಿಂದ ತರಾಟೆ

ಕೊಪ್ಪಳ: 'ನಾಲ್ಕು ವರ್ಷಗಳಿಂದ ನೀವು ಏನೂ ಮಾಡಿಲ್ಲ' ಎಂದು ಆರೋಪಿಸಿ ಇಲ್ಲಿನ ಕನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ್​ ದಡೇಸೂಗೂರು ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ.

ಈ ಕುರಿತ ವಿಡಿಯೋ ಒಂದು ಸಾಮಾಜಿಕ ಜಾಲತಾಣದಾದ್ಯಂತ ವೈರಲ್ ಆಗಿದ್ದು, ವಿಡಿಯೋ ಮಾಡದಂತೆ ಬಿಜೆಪಿ ಶಾಸಕ ದಡೇಸಗೂರು ಎಚ್ಚರಿಕೆ ನೀಡುವುದು ವಿಡಿಯೋದಲ್ಲಿ ಕಾಣಿಸುತ್ತದೆ.

ಸೋಮವಾರ ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಹುಳಕಿಹಾಳ ಕ್ಯಾಂಪ್ ಬಳಿ ಆಗಮಿಸಿದ್ದ ಶಾಸಕರ ಕಡೆ ತೆರಳಿದ ಸ್ಥಳೀಯರು, 'ನಾಲ್ಕು ವರ್ಷದಿಂದ ಏನ್ ಮಾಡಿದ್ದೀರಿ'  ಎಂದು  ನಾಲ್ಕು ವರ್ಷಗಳಿಂದ ಬಾಕಿ ಉಳಿದಿರುವ ಕಾಮಗಾರಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ  ಏನೇನು ಕೆಲಸ ಬೇಕು ಲೀಸ್ಟ್​ ಮಾಡ್ಕೊಂಡು ಬನ್ನಿ ಎಂದು ಶಾಸಕರು ಜನರನ್ನು ಸಮಾಧಾನಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News