ಚನ್ನರಾಯಪಟ್ಟಣ: ಸಿಡಿಲು ಬಡಿದು ಇಬ್ಬರು ಯುವಕರು ಮೃತ್ಯು

Update: 2022-04-14 05:34 GMT
ಮೃತ ಯುವಕರು

ಚನ್ನರಾಯಪಟ್ಟಣ: ಸಿಡಿಲು ಬಡಿದು ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ತಾಲೂಕಿನ ಬಸವನಪುರ ಗ್ರಾಮದ ಬಳಿ ನಡೆದಿದೆ. 

ಮೃತ ಯುವಕರನ್ನು ಬಸವನಪುರ ಗ್ರಾಮದ ಉದಯ್ ಕುಮಾರ್(24) ಹಾಗೂ ಸೂಸಲಗೆರೆ ಗ್ರಾಮದ ದರ್ಶನ್(19) ಎಂದು ಗುರುತಿಸಲಾಗಿದೆ. 

ಭಾರೀ ಗಾಳಿ- ಮಳೆ ಆರಂಭವಾಗಿದ್ದರಿಂದ ಇಲ್ಲಿನ ನುಗ್ಗೇಹಳ್ಳಿ ಹೋಬಳಿಯ ಬಸವನಪುರ ಗೇಟ್‌ ಬಳಿ ಬಸ್ ತಂಗುದಾಣವೊಂದರಲ್ಲಿ  ಆಶ್ರಯಕ್ಕಾಗಿ ನಿಂತಿದ್ದಾಗ ಸಿಡಿಲು ಬಡಿದಿದೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News