ವಿಜಯಪುರ: ಸಿಡಿಲು ಬಡಿದು ಯುವಕ ಮೃತ್ಯು
Update: 2022-04-15 04:45 GMT
ವಿಜಯಪುರ, ಎ.15: ಸಿಡಿಲು ಬಡಿದು ಯುವಕನೊರ್ವ ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿ ಗುರುವಾರ ರಾತ್ರಿ ಸಂಭವಿಸಿರುವುದು ವರದಿಯಾಗಿದೆ.
ಮೃತರನ್ನು ತಿಕೋಟಾ ಪಟ್ಟಣದ ಸೋಮದೇವರಹಟ್ಟಿ ಹಟ್ಟಿ ಎಲ್.ಟಿ.ನಂ 2ರ ನಿವಾಸಿ ಯುವರಾಜ ಡಾಕು ರಾಠೋಡ(22) ಎಂದು ಗುರುತಿಸಲಾಗಿದೆ.
ತೋಟದ ಮನೆಯಲ್ಲಿ ವಾಸವಾಗಿದ್ದ ಇವರು ಕಳೆದ ರಾತ್ರಿ 10 ಗಂಟೆ ಸುಮಾರಿಗೆ ಮೂತ್ರ ವಿಸರ್ಜನೆಗೆಂದು ಮನೆಯಿಂದ ಹೊರಗಡೆ ಹೋಗಿದ್ದರು. ಈ ವೇಳೆ ಗುಡುಗು, ಬಿರುಗಾಳಿ ಸಹಿತ ಭಾರೀ ಮಳೆ ಸುರಿಯುತ್ತಿತ್ತು. ಈ ವೇಳೆ ಸಿಡಿಲು ಬಡಿದು ಯುವರಾಜ ಡಾಕು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ತಿಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.