ಅಮಿತ್ ಶಾ ಬೆಂಗಳೂರಿಗೆ ಆಗಮಿಸಿದಂದು ಕೇಬಲ್ ತಂತಿ ಸ್ಫೋಟ ಪ್ರಕರಣ: ವರದಿ ಕೇಳಿದ ಸಚಿವಾಲಯ

Update: 2022-04-15 19:44 GMT

ಬೆಂಗಳೂರು, ಎ.15: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೆಂಗಳೂರಿಗೆ ಆಗಮಿಸಿದ ದಿನದಂದು ಕೇಬಲ್ ತಂತಿ ಸ್ಫೋಟಗೊಂಡ ಪ್ರಕರಣ ಸಂಬಂಧ ವರದಿ ನೀಡುವಂತೆ ಕೇಂದ್ರ ಗೃಹ ಸಚಿವಾಲಯ ಸರಕಾರವನ್ನು ಸೂಚಿಸಿದೆ ಎಂದು ವರದಿಯಾಗಿದೆ.

ಸದ್ಯ ಸ್ಫೋಟಗೊಂಡ ತಂತಿ ಸೇರಿದಂತೆ ಇನ್ನಿತರೆ ವಸ್ತುಗಳನ್ನು ಸಂಗ್ರಹಿಸಿ ರಾಜ್ಯ ಪೊಲೀಸರು, ವಿಧಿ ವಿಜ್ಞಾನ ಪ್ರಯೋಗಾಲಯಗೆ ಕಳುಹಿಸಿದ್ದಾರೆ. ಈ ವರದಿ ಬಂದ ನಂತರ ಕೇಂದ್ರ ಸಚಿವಾಲಯಕ್ಕೆ ರವಾನಿಸಲಿದ್ದು, ಜತೆಗೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಲಿದೆ ಎಂದು ಮೂಲಗಳು ತಿಳಿಸಿವೆ.

ಏನಿದು ಪ್ರಕರಣ?: ಎ.1ರ ಸಂಜೆ 4:30 ರ ಸುಮಾರಿಗೆ ಅಮಿತ್ ಶಾ ಬೆಂಗಳೂರಿಗೆ ಆಗಮಿಸಿದ್ದರು. ಅಂದು ಏಕಾಏಕಿ ಕೇಬಲ್ ತಂತಿಯ ಪೆಟ್ಟಿಗೆ ಸ್ಫೋಟಗೊಂಡಿತ್ತು. ಈ ವೇಳೆ ಪೊಲೀಸರು ಅಮಿತ್ ಶಾ ಸಂಚರಿಸುವ ಮಾರ್ಗವನ್ನು ಬದಲಿಸಿದ್ದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News