ಗಲಭೆಗಳನ್ನು ತಡೆಯಲು ಸರ್ಕಾರ ಬಿಗಿ ಕ್ರಮ ಕೈಗೊಳ್ಳಬೇಕು: ಬಿ.ಎಸ್ ಯಡಿಯೂರಪ್ಪ

Update: 2022-04-17 17:35 GMT

ಚಿತ್ರದುರ್ಗ: ಹಳೆ ಹುಬ್ಬಳ್ಳಿಯಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಪ್ರತಿಕ್ರಿಯಿಸಿದ್ದಾರೆ. 

ಚಿತ್ರದುರ್ಗದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ಗಲಭೆ ತಡೆಯಲು ಸರ್ಕಾರ ಬಿಗಿ ಕ್ರಮ ಕೈಗೊಳ್ಳಬೇಕು. ಗಲಭೆಗೆ ಯಾರೇ ಕಾರಣ ಆಗಿದ್ದರೂ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು' ಎಂದು ಸಲಹೆ ನೀಡಿದರು.

''ಇನ್ನು ಯಾವುದೇ ಗಲಭೆಗಳು ನಡೆದರೆ ಅದಕ್ಕೆ ಗೃಹ ಸಚಿವರಾಗಲಿ ಮುಖ್ಯಮಂತ್ರಿಗಳಾಗಲಿ ಹೊಣೆಗಾರರಲ್ಲ. ಹುಬ್ಬಳ್ಳಿ ರೀತಿಯ ಗಲಭೆಗಳು ರಾಜ್ಯದಲ್ಲಿ ನಡೆಯಬಾರದು‌'' ಎಂದು ತಿಳಿಸಿದರು. 

'150ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಗೆದ್ದು ಬಿಜೆಪಿ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ' ಎಂದು ಇದೇ ವೇಳೆ ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News