ದಿಂಗಾಲೇಶ್ವರ ಶ್ರೀಗಳ ಮಾತಿಗೆ ಅರ್ಥವಿಲ್ಲ, ಅವರು ಊಸರವಳ್ಳಿಯಂತೆ ಬಣ್ಣ ಬದಲಿಸಿ ಮಾತನಾಡುತ್ತಾರೆ: ಸಚಿವ ಬಿ.ಸಿ ಪಾಟೀಲ್
Update: 2022-04-18 12:23 GMT
ಚಿತ್ರದುರ್ಗ: 'ಈ ಹಿಂದೆ ಬಿ.ಎಸ್ ಯಡಿಯೂರಪ್ಪ ಅವರನ್ನು ಬೆಂಬಲಿಸಿ ಹೇಳಿಕೆ ನೀಡಿದ್ದ ದಿಂಗಾಲೇಶ್ವರ ಶ್ರೀಗಳು ಊಸರವಳ್ಳಿಯಂತೆ ಬಣ್ಣ ಬದಲಿಸಿ ಮಾತನಾಡುತ್ತಾರೆ' ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
'ಮಠಗಳಿಗೆ ಅನುದಾನ ನೀಡಲು ಕಮಿಷನ್ ಕೊಡಬೇಕಾಗುತ್ತದೆ' ಎಂಬ ದಿಂಗಾಲೇಶ್ವರ ಸ್ವಾಮೀಜಿ ಅವರ ಆರೋಪದ ಕುರಿತು ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
'ಶ್ರೀಗಳು ಲಂಚ ನೀಡುವ ಮೊದಲು ಪ್ರತಿಭಟನೆ ಮಾಡಬೇಕಾಗಿತ್ತು. ಕಾಂಗ್ರೆಸ್ ಕಾರ್ಯಕ್ರಮಕ್ಕೆ ಹೋಗಿ ಕಾಂಗ್ರೆಸ್ ಪದಾಧಿಕಾರಿಯಂತೆ ಮಾತಾಡಿದ್ದಾರೆ' ಎಂದು ಹೇಳಿದರು.